ಡಾ. ಶಿವಕುಮಾರ ಶ್ರೀಗಳ 115ನೇ ಜಯಂತಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ; 4 ಲಕ್ಷ ಜನ ಸೇರುವ ಸಾಧ್ಯತೆ
115th birth anniversary of Shivakumara Swami : ತುಮಕೂರು, ಮಾರ್ಚ್ 31: ನಾಳೆ (ಏ.1) ಡಾ. ಶಿವಕುಮಾರ ಶ್ರೀಗಳ 115ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ. ಇದೇ ವೇಳೆ 4 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.
ಗುರುವಂದನಾ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 8 ಕಡೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಿದ್ದಗಂಗಾ ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಕೆಂಪಹೊನ್ನಯ್ಯ ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಿದ್ದಾರ್ಥ ಅತಿಥಿ ಗೃಹ, ಸೌದೆ ಕೊಪ್ಪಲು, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದರ್ಶನದ ಊಟದ ಮನೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಏರ್ಪಡಿಸಲಾಗಿದೆ.
ಏ.1ರಂದು ಸಿದ್ದಗಂಗಾ ಮಠಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ; ಚುನಾವಣಾ ಪ್ರಚಾರಕ್ಕೂ ಚಾಲನೆ ಸಾಧ್ಯತೆ
ಬೃಹತ್
ಜಾಗದಲ್ಲಿ
ಪಾರ್ಕಿಂಗ್
ವ್ಯವಸ್ಥೆ
ತುಮಕೂರಿನಲ್ಲಿ
ಡಾ.
ಶಿವಕುಮಾರ
ಶ್ರೀಗಳ
115ನೇ
ಜಯಂತಿ
ಹಿನ್ನೆಲೆಯಲ್ಲಿ
ನಡೆಯುವ
ಗುರುವಂದನಾ
ಕಾರ್ಯಕ್ರಮಕ್ಕೆ
ಆಗಮಿಸುವ
ಭಕ್ತರಿಗೆ
ಅನುಕೂಲ
ಕಲ್ಪಿಸುವ
ಸಲುವಾಗಿ
ಬೃಹತ್
ಪಾರ್ಕಿಂಗ್
ವ್ಯವಸ್ಥೆ
ಮಾಡಲಾಗಿದೆ.
ಸಿದ್ದಗಂಗಾ
ಮಠದಲ್ಲಿ
ಶುಕ್ರವಾರ
ಗುರುವಂದನಾ
ಕಾರ್ಯಕ್ರಮ
ನಡೆಯಲಿದ್ದು,
20
ಎಕರೆ
ಪ್ರದೇಶದಲ್ಲಿ
ವಾಹನಗಳಿಗೆ
ಪಾರ್ಕಿಂಗ್
ವ್ಯವಸ್ಥೆ
ಮಾಡಲಾಗಿದೆ.
ಸಿದ್ದಗಂಗಾ ಮಠದ ಬಂಡೆಪಾಳ್ಯ ಬಳಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬಸ್, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ. ಸರಿ ಸುಮಾರು 4 ಲಕ್ಷ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದ್ದು, ಯಾವುದೇ ಅವ್ಯವಸ್ಥೆ ಆಗದಂತೆ ಪಾರ್ಕಿಂಗ್ ಮಾಡಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.
Koo Appಮಾನ್ಯ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ರವರು ಏಪ್ರಿಲ್ 1ರಂದು ತುಮಕೂರಿನ ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿ ಶ್ರೀ @bsbommai ಅವರೊಂದಿಗೆ ಇಂದು ಪೂರ್ವಭಾವಿ ಸಿದ್ಧತಾ ವ್ಯವಸ್ಥೆಗಳ ಪರಿವೀಕ್ಷಣೆ ನಡೆಸಲಾಯಿತು. ಸಚಿವ ಶ್ರೀ ಮಾಧುಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು. - Araga Jnanendra (@aragajnanendra) 31 Mar 2022
ಗುರುವಾರ
ರಾಹುಲ್
ಗಾಂಧಿ,
ಶುಕ್ರವಾರ
ಅಮಿತ್
ಶಾ
ಭೇಟಿ
ತುಮಕೂರಿನಲ್ಲಿ
ಬಿಜೆಪಿ
ಹಾಗೂ
ಕಾಂಗ್ರೆಸ್
ಫ್ಲೆಕ್ಸ್ಗಳು
ರಾರಾಜಿಸುತ್ತಿವೆ.
ಡಾ.
ಶಿವಕುಮಾರ
ಸ್ವಾಮೀಜಿಗಳ
115ನೇ
ಜಯಂತಿಯ
ಹಿನ್ನೆಲೆಯಲ್ಲಿ
ಇಂದು
(ಗುರುವಾರ)
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ಆಗಮಿಸಲಿದ್ದರೆ,
ಶುಕ್ರವಾರ
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮ ನಾಯಕರಿಗೆ ಸ್ವಾಗತ ಕೋರಲು ಹಾಕಿರುವ ಅಯಾ ಪಕ್ಷಗಳ ಕಾರ್ಯಕರ್ತರು ಭರ್ಜರಿ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ತುಮಕೂರಿನ ಬಿ.ಹೆಚ್. ರಸ್ತೆ ಫ್ಲೆಕ್ಸ್ಗಳಿಂದ ಆವೃತವಾಗಿದ್ದು, ತುಮಕೂರಿನ ಬಟವಾಡಿ ಎಪಿಎಂಸಿಯಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಎರಡು ಪಕ್ಷಗಳ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಬಲಭಾಗದಲ್ಲಿ ಬಿಜೆಪಿ ಧ್ವಜ, ಎಡಭಾಗದಲ್ಲಿ ಕಾಂಗ್ರೆಸ್ ಬಿಜೆಪಿ ಫ್ಲೆಕ್ಸ್ ಅಳವಡಿಸಲಾಗಿದೆ.
Koo Appಮುಖ್ಯಮಂತ್ರಿ @bsbommai ಅವರು ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ನಮಸ್ಕರಿಸಿದರು. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಉತ್ಸವದ ಅಂಗವಾಗಿ ನಾಳೆ ಹಮ್ಮಿಕೊಳ್ಳಲಾಗಿರುವ ಬಸವ ಭಾರತ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಆರಗ ಜ್ಞಾನೆಂದ್ರ ಮತ್ತು ಇತರರು ಉಪಸ್ಥಿತರಿದ್ದರು. - CM of Karnataka (@CMOKarnataka) 31 Mar 2022
ಬಿಗಿ
ಪೊಲೀಸ್
ಭದ್ರತೆ
ನಾಳೆ
ಸಿದ್ದಗಂಗಾ
ಮಠಕ್ಕೆ
ಅಮಿತ್
ಶಾ
ಭೇಟಿ
ಹಿನ್ನೆಲೆಯಲ್ಲಿ
ತುಮಕೂರು
ನಗರ
ಹಾಗೂ
ಸಿದ್ದಗಂಗಾ
ಮಠದಲ್ಲಿ
ಬಿಗಿ
ಪೊಲೀಸ್
ಭದ್ರತೆ
ಕೈಗೊಳ್ಳಲಾಗಿದೆ.
ತುಮಕೂರು
ವಿವಿ
ಹೆಲಿಪ್ಯಾಡ್ನಿಂದ
ಹಿಡಿದು
ಸಿದ್ದಗಂಗಾ
ಮಠದವರೆಗೂ
ಪೊಲೀಸ್
ಭದ್ರತೆ
ಏರ್ಪಡಿಸಲಾಗಿದೆ.
ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ದಿನಗಳಿಂದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸೇರಿದಂತೆ ಎಎಸ್ಪಿ, ಡಿಎಸ್ಪಿಗಳು ಭಾಗಿಯಾಗಿದ್ದಾರೆ. ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ನಲ್ಲಿ ಕೆಲವು ಬದಲಾವಣೆ ಕೈಗೊಳ್ಳಲಾಗಿದೆ.