ಶಬರಿಮಲೆ ಉಳಿಸಿಕೊಳ್ಳಲು ಅಯೋಧ್ಯೆ ಮಾದರಿ ಹೋರಾಟ: ವಿಎಚ್ಪಿ
ಶಬರಿಮಲೆ, ನವೆಂಬರ್ 21: ಶಬರಿಮಲೆಯನ್ನು ಉಳಿಸಿಕೊಳ್ಳಲು ಅಯೋಧ್ಯೆ ಮಾದರಿಯ ಹೋರಾಟ ನಡೆಸುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಘೋಷಿಸಿದೆ.
ದೇವರನ್ನು ನೋಡಲು ಲಿಂಗಭೇದ ಇರಬಾರದು: ಸಿದ್ದರಾಮಯ್ಯ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ದೊರಕಿಸಿಕೊಟ್ಟ ಸುಪ್ರಿಂಕೋರ್ಟ್ ಹಾಗೂ ಅದರ ಆದೇಶ ಪಾಲನೆಗೆ ಮುಂದಾಗಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ವಿರುದ್ಧ ವಿಎಚ್ಪಿ ಆಕ್ರೋಶ ವ್ಯಕ್ತಪಡಿಸಿದೆ.
ಶಬರಿಮಲೆ ತಲುಪಿದ ನಳಿನ್ ಕುಮಾರ್ ಕಟೀಲ್, ಬಂಧನ ಸಾಧ್ಯತೆ
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಔರಂಗಾಜೇಬ್, ಆದಿಲ್ ಶಾ ರಂತೆ ವರ್ತಿಸುತ್ತಿದ್ದಾರೆ, ಭಕ್ತಾದಿಗಳ ಭಾವನೆಗೆ ಅವರು ಬೆಲೆ ಕೊಡುತ್ತಿಲ್ಲ ಎಂದು ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಟೀಕಿಸಿದ್ದಾರೆ.
ಪಿಣರಾಯಿ ವಿಜಯನ್ ಅವರು ಕೇರಳವನ್ನು ಕಾಶ್ಮೀರದಂತೆ ಹಿಂದು ಮುಕ್ತ ಮಾಡಲು ಹೊರಟಿದ್ದಾರೆ. ಹಿಂದುಗಳ ನಂಬಿಕೆ ಮತ್ತು ಸಂಪ್ರದಾಯಕ್ಕೆ ಧಕ್ಕೆ ಉಂಟುಮಾಡಲಾಗುತ್ತಿದೆ. ಶಬರಿಮಲೆ ವಿಚಾರದಲ್ಲಿ ಪೂರ್ಣ ಹಿಂದು ವಿರೋಧಿಯಾಗಿ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.