ಲಾಕ್ಡೌನ್ನಲ್ಲಿ ವಿಮಾನ ತಯಾರಿಸಿ ವಿದೇಶ ಸುತ್ತಿ ಬಂದ ಕೇರಳ ವ್ಯಕ್ತಿ!
ತಿರುವನಂತಪುರಂ, ಜುಲೈ. 27: ಕೋವಿಡ್ನಿಂದ ಲಾಕ್ಡೌನ್ ಹಲವಾರು ಜನರಿಗೆ ಶಾಪವಾಗಿ ಪರಿಣಮಿಸಿ ಜೀವ ಜೀವನ ಎರಡಕ್ಕೂ ಎರವಾದರೆ ಕೆಲವರು ಅದನ್ನೆ ಲಾಭದಾಯಕವಾಗಿ ಮಾಡಿಕೊಂಡು ಯಶಸ್ಸನ್ನು ಕಂಡುಕೊಂಡಿದ್ದಾರೆ. ಆ ಬಗೆಯ ಯಶಸ್ಸಿನ ಕತೆಗಳು ಈಗ ಒಂದೊಂದಾಗಿ ಬರತೊಡಗಿವೆ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಜನರು ಮನೆಯಲ್ಲಿ ಕಾಫಿ ಅಥವಾ ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಯಾವುದೋ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಯುಕೆ ಮೂಲದ ಆಟೋಮೊಬೈಲ್ ಇಂಜಿನಿಯರ್ ವಿಮಾನವನ್ನು ನಿರ್ಮಿಸುತ್ತಿದ್ದರು. ಅವರು ನಾಲ್ಕು ಆಸನಗಳ ವಿಮಾನ ನಿರ್ಮಿಸಿ ಈಗ ವಿವಿಧ ದೇಶಗಳನ್ನು ಸುತ್ತಿ ಬಂದಿದ್ದಾರೆ.
Breaking: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೇರಳ ಬಿಷಪ್ ಬಂಧನ
ಆರ್ಎಸ್ಪಿ ನಾಯಕ ಮತ್ತು ಮಾಜಿ ಶಾಸಕ ಎ.ವಿ. ತಾಮರಾಶನ್ ಅವರ ಪುತ್ರ ಅಶೋಕ್ 2006 ರಲ್ಲಿ ಪಾಲಕ್ಕಾಡ್ನ ಎನ್ಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ ಫೋರ್ಡ್ನ ಉದ್ಯೋಗಿಯಾಗಿ ಯುಕೆಗೆ ತೆರಳಿದ್ದರು. ಬಳಿಕ ಈಗ ರಜೆಯ ಮೇಲೆ ಕೇರಳದ ಅಲಪ್ಪುಳಕ್ಕೆ ಬಂದಿದ್ದಾರೆ. ಅವರು ಬಾಲ್ಯದಿಂದಲೂ ವಿಮಾನಗಳು ನನ್ನನ್ನು ಆಕರ್ಷಿಸಿದ್ದವು ಹಾಗಾಗಿ ಈ ಬಗೆಯ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ನಾನು ಯುಕೆ ತಲುಪಿದ ನಂತರ ಅಲ್ಲಿಯೇ ನೆಲೆಸಿದೆ. ಆಗ ನಾನು ವಿಮಾನವನ್ನು ಖರೀದಿಸುವ ಆಸಕ್ತಿ ಹೊಂದಿದ್ದೆ. ಅದಕ್ಕಾಗಿ ನಾನು ಪೈಲಟ್ ಪರವಾನಗಿಯನ್ನು ಪಡೆದುಕೊಂಡು ವಿಮಾನಗಳನ್ನೂ ಹುಡುಕಲು ಪ್ರಾರಂಭಿಸಿದೆ. ಆಗ ನನಗೆ ಸುಮಾರು 5 ರಿಂದ 6 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅರಿವಾಯಿತು. ಬಳಿಕ ತಾನೆ ಒಂದು ವಿಮಾನವನ್ನು ನಿರ್ಮಿಸಲು ನಿರ್ಧರಿಸಿದೆ. ಯುಕೆ ಮತ್ತು ಇತರ ದೇಶಗಳಲ್ಲಿ ಅನೇಕ ಜನರು ಸಣ್ಣ ವಿಮಾನಗಳನ್ನು ನಿರ್ಮಿಸುತ್ತಿದ್ದಾರೆ. ವಿಮಾನದ ಭಾಗಗಳು ಇಲ್ಲಿ ಸುಲಭವಾಗಿ ಲಭ್ಯವಿವೆ ಎಂದು ಅವರು ಹೇಳಿದರು.
ನಾನು ನನ್ನ ವಿಮಾನದ ಭಾಗಗಳನ್ನು ದಕ್ಷಿಣ ಆಫ್ರಿಕಾದಿಂದ ಎಂಜಿನ್ ಅನ್ನು ಆಸ್ಟ್ರಿಯಾದಿಂದ ಮತ್ತು ಏವಿಯಾನಿಕ್ಸ್ ಉಪಕರಣಗಳನ್ನು ಅಮೆರಿಕಾದಿಂ ಖರೀದಿಸಿದೆ. ನಾನು ಎಸ್ಸೆಕ್ಸ್ನ ನನ್ನ ಮನೆಯ ಬಳಿ ಕೆಲಸ ಮಾಡಲು ಕೇಂದ್ರ ಸ್ಥಾಪಿಸಿ 2020ರ ಏಪ್ರಿಲ್ನಲ್ಲಿ ಕೆಲಸ ಹೋಗಲು ಆರಂಭಿಸಿದೆ ಎಂದು ಅಶೋಕ್ ಹೇಳಿದರು.
ಯುಕೆಯಲ್ಲಿ ಕೋವಿಡ್ ಪ್ರೇರಿತ ಲಾಕ್ಡೌನ್ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಅವರ ಕಂಪನಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಆಗ ಅವರು ತಮ್ಮ ಯೋಜನೆಯ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಿತು. ಆರಂಭದಲ್ಲಿ, ನಾನು ಎರಡು ಆಸನಗಳ ವಿಮಾನವನ್ನು ನಿರ್ಮಿಸಲು ನಿರ್ಧರಿಸಿದೆ. ಆದಾಗ್ಯೂ, ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೌಟುಂಬಿಕ ಪ್ರವಾಸಕ್ಕೆ ನನಗೆ ನಾಲ್ಕು ಆಸನಗಳ ವಿಮಾನದ ಅಗತ್ಯವಿದ್ದ ಕಾರಣ ನಾನು ನಾಲ್ಕು ಆಸನಗಳ ವಿಮಾನ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.
ಮೂರು ತಿಂಗಳ ಕಾಲ ನಿರಂತರ ಹಾರಾಟ
ಯುಕೆ ಸಿವಿಲ್ ಏವಿಯೇಷನ್ ಅಥಾರಿಟಿ ತನ್ನ ಕೆಲಸವನ್ನು ಮೇಲ್ವಿಚಾರಣೆ ಮಾಡಿದ್ದು, ಅದರ ಪರಿಶೀಲನೆ ಮತ್ತು ಅನುಮೋದನೆಯ ನಂತರವೇ ನಿರ್ಮಾಣದ ಪ್ರತಿ ಹಂತವನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದರು. ಅಶೋಕ್ ಮೂರು ತಿಂಗಳ ಕಾಲ ನಿರಂತರವಾಗಿ ವಿಮಾನದಲ್ಲಿ ಹಾರುವ ಪರೀಕ್ಷೆ ಕೈಗೊಂಡರು. ಅಂತಿಮವಾಗಿ ಫೆಬ್ರವರಿಯಲ್ಲಿ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿತು ಎಂದು ಅಶೋಕ್ ಹೇಳಿದರು.
1,500 ಗಂಟೆಗಳ ಕಾಲ ಕೆಲಸ
ವಿಮಾನವನ್ನು ನಿರ್ಮಿಸಲು ಸುಮಾರು 1.8 ಕೋಟಿ ಖರ್ಚು ಮಾಡಿ ಮತ್ತು 1,500 ಗಂಟೆಗಳ ಕಾಲ ಕೆಲಸ ಮಾಡಿದೆ. ವಿಮಾನವು 520 ಕೆಜಿ ತೂಕವನ್ನು ಹೊಂದಿದ್ದು, ನಾಲ್ಕು ಪ್ರಯಾಣಿಕರನ್ನು ಒಳಗೊಂಡಂತೆ 950 ಕೆಜಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಒಂದು ಗಂಟೆಯಲ್ಲಿ 250 ಕಿಮೀ ಕ್ರಮಿಸಬಲ್ಲದು ಎಂದು ಅಶೋಕ್ ಹೇಳಿದರು.
ಫ್ರಾನ್ಸ್, ಜರ್ಮನಿ, ಆಸ್ಟ್ರಿಯಾಗೆ ಪ್ರವಾಸ
ಅವರು ವಿಮಾನಕ್ಕೆ ಜಿ-ದಿಯಾ ಎಂದು ಹೆಸರಿಸಿಟ್ಟಿದ್ದು, ಅದು ಅವರ ಮಗಳು ದಿಯಾ (ಜಿ ಎಂಬುದು ದೇಶದ ಕೋಡ್) ಹೆಸರಾಗಿದೆ. ವಿಮಾನ ಹಾರಲು ಒಪ್ಪಿಗೆ ಪಡೆದ ನಂತರ ಅಶೋಕ್ ಮತ್ತು ಅವರ ಇಬ್ಬರು ಸ್ನೇಹಿತರು ಫ್ರಾನ್ಸ್, ಜರ್ಮನಿ, ಆಸ್ಟ್ರಿಯಾ ಮತ್ತು ಜೆಕ್ ರಿಪಬ್ಲಿಕ್ಗೆ ಹಾರಾಟ ನಡೆಸಿದ್ದಾರೆ. ಸದ್ಯಕ್ಕೆ ವಿಮಾನವು 86 ಗಂಟೆಗಳ ಹಾರಾಟವನ್ನು ಮಾಡಿದೆ. ಮುಂದಿನ ತಿಂಗಳು ಯುಕೆಗೆ ಹಿಂದಿರುಗಿದ ನಂತರ ಹೆಚ್ಚಿನ ಪ್ರವಾಸಗಳನ್ನು ಯೋಜಿಸುತ್ತಿರುವುದಾಗಿ ಅಶೋಕ್ ಹೇಳಿದ್ದಾರೆ.
ಅಶೋಕ್ ದಂಪತಿಗೆ ಇಬ್ಬರು ಮಕ್ಕಳು
ಅಶೋಕ್ ಅವರ ಪತ್ನಿ ಅಭಿಲಾಷಾ ದುಬೆ, ಯುಕೆಯಲ್ಲಿ ವಿಮಾ ದತ್ತಾಂಶ ವಿಶ್ಲೇಷಕರಾಗಿದ್ದಾರೆ. ಇವರು ಇಂದೋರ್ನವರು. ತಾರಾ ಅವರ ಹಿರಿಯ ಮಗಳು. ಯುಕೆ ಮತ್ತು ಇತರ ದೇಶಗಳಲ್ಲಿ ವಿಮಾನಗಳನ್ನು ನಿರ್ಮಿಸುವುದು ಕೆಲವೇ ಕಾನೂನು ತೊಡಕುಗಳನ್ನು ಹೊಂದಿದೆ. ಆದರೆ ಇದು ಆಟೋಮೊಬೈಲ್ ತಯಾರಿಸುವಂತಿದೆ ಎಂದು ಅಶೋಕ್ ಅವರು ಹೇಳಿದ್ದಾರೆ.