ವಯನಾಡಿನಲ್ಲಿ ಮರು ಮತದಾನಕ್ಕೆ ಆಗ್ರಹಿಸಿದ ಎನ್ಡಿಎ ಅಭ್ಯರ್ಥಿ
ವಯನಾಡು, ಏಪ್ರಿಲ್ 23: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಇಂದು ಮತದಾನ ಪ್ರಕ್ರಿಯೆಲ್ಲಿ ಗೊಂದಲ, ವಿಳಂಬ ಉಂಟಾಗಿ ಮತದಾರರು ಗಂಟೆಗಟ್ಟಲೇ ಕ್ಯೂನಲ್ಲಿ ಕಾಯಬೇಕಾಯಿತು. ಇವಿಎಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮರು ಮತದಾನಕ್ಕೆ ಎನ್ಡಿಎ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಯನಾಡು ಬಿಜೆಪಿ ಅಭ್ಯರ್ಥಿ ತುಷಾರ್ ಅವರು ಅರಪ್ಪಟ್ಟಾದ ಮೂಪ್ಪನಾಡ್ ಪಂಚಾಯಿತಿ ವ್ಯಾಪ್ತಿಯ ಸಿಎಂಎಸ್ ಹೈಯರ್ ಸೆಕಂಡರಿ ಶಾಲೆಯ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಹಾಳಾಗಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಎರಡೆರಡು ಬಾರಿ ಬಟನ್ ಒತ್ತಿದರೂ ವೋಟ್ ಬೀಳುತ್ತಿಲ್ಲ, ಇವಿಎಂ ಸಂಪೂರ್ಣ ಹಾಳಾಗಿದೆ ಎಂದು ದೂರಿದ್ದಾರೆ.
Wayanad: People queue up at a polling booth in Sugandhagiri to cast their vote in the third phase of polling of #LokSabhaElections2019. #Kerala pic.twitter.com/ugt44TxtKT
— ANI (@ANI) April 23, 2019
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಹಲವು ಬೂತ್ ಗಳಲ್ಲಿ ಇವಿಎಂ ದೋಷ ಕಂಡು ಬಂದಿದ್ದು, ಚುನಾವಣಾ ಆಯೋಗ ಈ ಬಗ್ಗೆ ಗಮನಿಸುತ್ತಿದೆ ಎಂಬ ನಂಬಿಕೆ ಇದೆ ಎಂದಿದಾರೆ.
ಕೇರಳದಲ್ಲಿ 2.61 ಕೋಟಿ ಮತದಾರರಿದ್ದು, ಈ ಪೈಕಿ 1.34 ಕೋಟಿ ಮಹಿಳೆಯರು ಹಾಗೂ 1.26 ಕೋಟಿ ಪುರುಷ ಮತದಾರರಿದ್ದಾರೆ. 174 ತೃತೀಯಲಿಂಗಿಗಳಿದ್ದಾರೆ. 227 ಅಭ್ಯರ್ಥಿಗಳ ಪೈಕಿ 25 ಮಂದಿ ಮಹಿಳೆಯರಿದ್ದಾರೆ.