ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು
ತಿರುವನಂತಪುರ, ಫೆಬ್ರವರಿ 08; ತಿರುವನಂತಪುರ- ಕಾಸರಗೋಡು ನಡುವಿನ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗೆ 64 ಸಾವಿರ ಕೋಟಿ ರೂ. ಸಂಪನ್ಮೂಲ ಕ್ರೋಡಿಕರಣ ಮಾಡುವುದಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.
ಕೇರಳ ಸರ್ಕಾರದ ಉದ್ದೇಶಿತ ಸೆಮಿ ಹೈಸ್ಪೀಡ್ ರೈಲು ಯೋಜನೆ 529.45 ಕಿ. ಮೀ. ಅಂತರವನ್ನು ಹೊಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರವನ್ನು ಬರೆದಿದ್ದಾರೆ.
ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ
ಸಂಬಂಧಿಸಿದ ಅನುಮೋದನೆಗಳ ಬಳಿಕ ಯೋಜನೆಯ ನೋಡಲ್ ಏಜೆನ್ಸಿ ಕೇರಳ ರೈಲು ಅಭಿವೃದ್ಧಿ ನಿಗಮ (ಕೆ-ರೈಲ್) ಯೋಜನೆ ಸಂಬಂಧ ಭೂಸ್ವಾಧೀನವನ್ನು ಆರಂಭಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ: ಚೀನಾ ಕಂಪನಿಗಳು ಔಟ್
ಸೆಮಿ ಹೈಸ್ಪೀಡ್ ರೈಲು ಯೋಜನೆಯನ್ನು ಜಾರಿಗೊಳಿಸಲು ಕೇರಳ ಸರ್ಕಾರ ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಟಿವ್ ಏಜೆನ್ಸಿ ಜೊತೆಗೂಡಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 5 ತಿಂಗಳ ಹಿಂದೆ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಎಡಿಬಿಐನಿಂದ ಸಾಲ ಪಡೆಯಲು ಅನುಮತಿ ಕೇಳಿ ಪತ್ರವನ್ನು ಬರೆದಿದ್ದರು. ಕಳೆದ ತಿಂಗಳು ಮಂಡನೆಯಾದ ಕೇರಳ ಬಜೆಟ್ನಲ್ಲಿಯೂ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಸ್ತಾಪವನ್ನು ಘೋಷಣೆ ಮಾಡಲಾಗಿತ್ತು.
2019ರಲ್ಲಿ ಮೊದಲು ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಪ್ಯಾರೀಸ್ ಮೂಲದ ಕಂಪನಿಯೊಂದು ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿತ್ತು. ಯೋಜನೆಗೆ 185 ಹೆಕ್ಟೇರ್ ರೈಲ್ವೆ ಭೂಮಿ, 1,198 ಹೆಕ್ಟೇರ್ ಖಾಸಗಿ ಭೂಮಿ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ರೈಲು ಯೋಜನೆ ಪೂರ್ಣಗೊಂಡರೆ 529.45 ಕಿ. ಮೀ. ಅಂತರವನ್ನು 4 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ತಿರುವನಂತಪುರ-ಕಾಸರಗೋಡು ನಡುವಿ ಪ್ರಯಾಣದ ಅವಧಿ 12 ಗಂಟೆಗಳು.
ಸೆಮಿ ಹೈಸ್ಪೀಡ್ ರೈಲು ಯೋಜನೆಯಿಂದಾಗಿ ತಿರುವನಂತಪುರ-ಎರ್ನಾಕುಲಂ-ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.