ಕೇರಳ ಬುಡಕಟ್ಟು ಜನಾಂಗದ ಶ್ರೀಧನ್ಯಾ ಈಗ ಕೋಳಿಕ್ಕೋಡ್ ಉಪ ಜಿಲ್ಲಾಧಿಕಾರಿ
ಕೋಳಿಕ್ಕೋಡ್, ಮೇ 5: ಕೇರಳದ ಬುಡಕಟ್ಟು ಜನಾಂಗದ ಶ್ರೀಧನ್ಯಾ ಈಗ ಕೋಳಿಕ್ಕೋಡ್ ಉಪ ಜಿಲ್ಲಾಧಕಾರಿಯಾಗಿ ನೇಮಕವಾಗಿದ್ದಾರೆ. ಶ್ರೀಧನ್ಯಾ 2018ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿದ ಬುಡಕಟ್ಟು ಮಹಿಳೆಯಾಗಿದ್ದಾರೆ.
Recommended Video
ಶ್ರೀಧನ್ಯಾ ಕೋಳಿಕ್ಕೋಡ್ನ ದೇವಗಿರಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪೂರೈಸಿ, ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದರು.
ವಯನಾಡು ಜಿಲ್ಲೆಯ ಪುದುತನ ಪಂಚಾಯತ್ ನಿವಾಸಿಯಾಗಿರುವ ಶ್ರೀಧನ್ಯಾ ಕುರುಚಿಯಾ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಿವಿಲ್ ಪರೀಕ್ಷೆಯಲ್ಲಿ 410ನೇ ಸ್ಥಾನ ಗಳಿಸಿದ್ದರು.
ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರಿ ಯೋಜನೆಯೊಂದರ ಭಾಗವಾಗಿ ಕೆಲಸ ಮಾಡುತ್ತಿದ್ದಾಗ ಮಾನಂತವಾಡಿ ಉಪ ಜಿಲ್ಲಾಧಕಾರಿ ಶ್ರೀರಾಮ್ ಸಾಂಬಶಿವ್ ರಾವ್ ಅವರಿಗೆ ಜನರು ನೀಡುತ್ತಿದ್ದ ಗೌರವ ಶ್ರೀಧನ್ಯಾಳನ್ನು ಐಎಎಸ್ನತ್ತ ಸೆಳೆದಿತ್ತು.
900 ಕುಟುಂಬವನ್ನು ದತ್ತು ಪಡೆದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ
ಆದರೆ ಅಶ್ಚರ್ಯವೆಂಬಂತೆ ಶ್ರೀರಾಮ್ ಸಾಂಬಶಿವ್ ಅವರು ಆಗ ಕೋಳಿಕ್ಕೋಡ್ ಜಿಲ್ಲಾಧಿಕಾರಿಯಾಗಿದ್ದು, ಈಗ ಎಲ್ಲಿಯೇ ಶ್ರೀಧನ್ಯಾ ಉಪಜಿಲ್ಲಾಧಿಕಾರಿಯಾಗಿದ್ದಾರೆ.