ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯನಾಡಿನಲ್ಲಿ ಸ್ಮೃತಿ ಇರಾನಿ ಸಮಾವೇಶ ನಾಳೆಗೆ ಮುಂದೂಡಿಕೆ

|
Google Oneindia Kannada News

ತಿರುವನಂತಪುರಂ, ಏ.20: ವಯನಾಡಿನಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಸ್ಮೃತಿ ಇರಾನಿ ಅವರ ಸಮಾವೇಶ ನಾಳೆ(ಏ.21)ಗೆ ಮುಂದೂಡಲಾಗಿದೆ.ವಯನಾಡು ಸ್ಮೃತಿ ಇರಾನಿ ವಯನಾಡಿನಲ್ಲಿ ಎನ್‌ಡಿಎ ಅಭ್ಯರ್ಥಿ ತುಷಾರ್ ವೆಲಪಲ್ಲಿ ಅವರ ಪರವಾಗಿ ಪ್ರಚಾರ ನಡೆಸುವವರಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಲಿದ್ದಾರೆ. ಆದರೆ ಏಕಾಏಕಿ ಸ್ಮೃತಿ ಇರಾನಿ ಪ್ರಚಾರವನ್ನು ಮುಂದೂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಲೋಕ ಸಮರ: ವಯನಾಡಿನಲ್ಲಿ ಇಂದು ಸ್ಮೃತಿ, ಪ್ರಿಯಾಂಕಾ ರೋಡ್‌ ಶೋ ಲೋಕ ಸಮರ: ವಯನಾಡಿನಲ್ಲಿ ಇಂದು ಸ್ಮೃತಿ, ಪ್ರಿಯಾಂಕಾ ರೋಡ್‌ ಶೋ

ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತೀವ್ರ ಸ್ಪರ್ಧೆಯೊಡ್ಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಯನಾಡಿನಲ್ಲೂ ರಾಹುಲ್ ವಿರುದ್ಧ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಸಮಾವೇಶವನ್ನು ಒಂದು ದಿನ ಮುಂದೂಡಲಾಗಿದೆ.

Smriti irani Road show postpond in Wayanad

ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ನಡುವೆ ಅಮೇಥಿಯಲ್ಲಿ ಸ್ಪರ್ಧೆ ತೀವ್ರ ತುರುಸುಗೊಂಡಿದೆ. ಇದೇ ಸೋಲಿನ ಭಯದಿಂದ ರಾಹುಲ್ ವಯನಾಡಿಗೆ ಬಂದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ರಾಹುಲ್ ರಾಹುಲ್ ಇದನ್ನು ನಿರಾಕರಿಸಿದ್ದು ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ನೀಡಲು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

English summary
Lok Sabha elections 2019: Central minister Smriti Irani Road show postponed in Wayanad due to some reason. She will support NDS candidate Tushar In Wayanad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X