ಕುದುರೆ ಏರಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿನಿಗೆ ಆನಂದ್ ಮಹೀಂದ್ರಾ ಉಘೇ!
ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಈ ವಿದ್ಯಾರ್ಥಿನಿ ಈಗ ಇಂಟರ್ ನೆಟ್ ನಲ್ಲಿ ಭರ್ಜರಿ ಸುದ್ದಿ ಆಗಿದ್ದಾಳೆ. ಹತ್ತನೇ ತರಗತಿ ಪರೀಕ್ಷೆ ಬರೆಯುವ ಸಲುವಾಗಿ ಈ ವಿದ್ಯಾರ್ಥಿನಿ ತಾನು ಸ್ವತಃ ಕುದುರೆ ಓಡಿಸಿಕೊಂಡು ತೆರಳಿದ್ದಾಳೆ. ಹಾಗೆ ತೆರಳುವ ವೇಳೆ ಆ ದೃಶ್ಯದ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿದೆ. ಇದಕ್ಕೆ ಅಪಾರ ಪ್ರಮಾಣದ ಲೈಕ್ಸ್ ಬಂದು, ಶೇರ್ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ, ಎಲ್ಲಕ್ಕಿಂತ ವಿಶಿಷ್ಟ ಹಾಗೂ ಆಸಕ್ತಿಕರ ಏನೆಂದರೆ, ಆ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಗಮನವನ್ನೂ ಸೆಳೆದಿದೆ. ಈ ವಿದ್ಯಾರ್ಥಿನಿಯನ್ನು 'ಹೀರೋ' ಎಂದು ಮನಸಾರೆ ಹೊಗಳಿರುವ ಅವರು, ಶಿಕ್ಷಣದ ಬಗ್ಗೆ ಆಕೆಗಿರುವ ಬದ್ಧತೆಯನ್ನು ಮೆಚ್ಚುಗೆ ಸೂಚಿಸಿದ್ದಾರೆ.
This video clip from my #whatsappwonderbox shows how a girl student is going to write her Class X final exam in Thrissur district, Kerala. This story made my Sunday morning brew of @arakucoffeein taste better! After all, ARAKU coffee is about #cupofchange #GirlPower @NanhiKali pic.twitter.com/45zOeFEnwV
— Manoj Kumar (@manoj_naandi) 7 April 2019
ಮನೋಜ್ ಕುಮಾರ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂದಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ನನ್ನ ವಾಟ್ಸ್ ಅಪ್ ವಂಡರ್ ಬಾಕ್ಸ್ ನದು. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೇಗೆ ಹೋಗುತ್ತಾಳೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಮೆಚ್ಚಿಕೊಂಡು, ಇದು ಜಾಗತಿಕ ಮಟ್ಟದಲ್ಲಿ ವೈರಲ್ ಆಗಬೇಕು. ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಆಕೆ ಮತ್ತು ಕುದುರೆಯ ಭಾವಚಿತ್ರ ನನಗೆ ಬೇಕು ಮತ್ತು ಅದನ್ನು ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ ಎಂದು ಹೊಗಳಿದ್ದಾರೆ.
ಹಾರ್ನ್ ಕಿರಿಕಿರಿ ತಪ್ಪಿಸೋಕೆ 11ರ ಹುಡುಗಿ ನೀಡಿದ ಐಡಿಯಾಕ್ಕೆ ಮಹೀಂದ್ರಾ ಮೆಚ್ಚುಗೆ
ಆನಂದ್ ರ ಮನವಿಗೆ ಪ್ರತಿಕ್ರಿಯೆ ಸಿಕ್ಕಿದ್ದು, ಆ ವಿದ್ಯಾರ್ಥಿನಿ ಹೆಸರು ಕೃಷ್ಣಾ ಹಾಗೂ ಆಕೆ ಕುದುರೆ ಹೆಸರು ರಾಣಾಕೃಷ್ ಎಂದು ಹೇಳಲಾಗಿದೆ.