ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ತಿರುವನಂತಪುರಂ, ಜೂನ್ 8: ಈಗಾಗಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಗಾಳಿ ಬೀಸುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ.
ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೂನ್ 9-11ರವರೆಗೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕಳೆದ ಆಗಸ್ಟ್ನಲ್ಲಿ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲು 24 ಗಂಟೆ ಬಾಕಿ; ಉತ್ತರ ಭಾರತ ಧಗಧಗ
ರೆಡ್ ಅಲರ್ಟ್ ಎಂದರೆ ಆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ, ಜೂನ್ 10ರಂದು ತ್ರಿಶೂರ್, ಜೂನ್ 10ರಂದು ಎರ್ನಾಕುಲಮ್, ಜೂನ್ 11ರಂದು ಕೋಳಿಕ್ಕೋಡ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೆಲವು ಕಡೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಅಂದರೆ ಹೆಚ್ಚು ಮಳೆಯಾಗಲಿದೆ ಎಂದರ್ಥ , ತಿರುವನಂತಪುರಂ, ಕೊಲ್ಲಮ್, ಎರ್ನಾಕುಲಮ್, ತ್ರಿಶೂರ್ನಲ್ಲಿ ಜೂನ್9 -10ರಂದು ಹೆಚ್ಚು ಮಳೆಯಾಗಲಿದೆ.
ಕಳೆದ ಬಾರಿ ಓಕಿ ಚಂಡಮಾರುತದಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. 35-45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಅರಬ್ಬಿ ಸಮುದ್ರ, ಸೋಮಾಲಿಯಾ, ಲಕ್ಷದ್ವೀಪ, ಮಾಲ್ಡೀವ್ಸ್ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.