ಕೊರೊನಾ ಸೋಂಕಿತರ ಏರ್ ಲಿಫ್ಟ್ಗೆ ತಯಾರಾದ ನೌಕಾಪಡೆ
ಕೊಚ್ಚಿ, ಏಪ್ರಿಲ್ 15 : ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ಯಾರ್ಡ್ ವಿಶೇಷ ಘಟಕವೊಂದನ್ನು ಸ್ಥಾಪನೆ ಮಾಡಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ನೆರವಾಗಲು ಇದನ್ನು ಸ್ಥಾಪನೆ ಮಾಡಲಾಗಿದೆ.
ದ್ವೀಪ, ರಸ್ತೆ ಸಂಪರ್ಕ ಸರಿಯಾಗಿ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಸಿಲುಕಿದ ಕೋವಿಡ್ -19 ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿಶೇಷ ತಂಡವನ್ನು ರಚನೆ ಮಾಡಿದೆ. ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತದೆ.
ಹೊಗಳಿಕೆಗಿಂತ ನಮಗೆ ಹಣದ ಅವಶ್ಯಕತೆ ಇದೆ: ಕೇರಳ
ಈ ಸೇವೆಗಾಗಿಯೇ ವಿಶೇಷ ಹೆಲಿಕಾಪ್ಟರ್ ಸಿದ್ಧಪಡಿಸಲಾಗಿದೆ. ರೋಗಿಗಳನ್ನು ಸಾಗಣೆ ಮಾಡಿದರೂ ಹೆಲಿಕಾಪ್ಟರ್ ಸಿಬ್ಬಂದಿಗೆ ಸೋಂಕು ಹರಡದಂತೆ ತಡೆಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕ-ಕೇರಳ ಗಡಿ ತೆರವು; ಅಂಬ್ಯುಲೆನ್ಸ್ ಓಡಾಟಕ್ಕೆ ಒಪ್ಪಿಗೆ
ನೌಕಾಪಡೆಯ ಯಾರ್ಡ್ನಲ್ಲಿರುವ ವೈದ್ಯಕೀಯ ಅಧಿಕಾರಿಯ ಸಲಹೆಯಂತೆ ವಿಶೇಷ ತಂಡ ರಚನೆಯಾಗಿದೆ. ಸುಮಾರು 59 ಲಕ್ಷ ವೆಚ್ಚದಲ್ಲಿ ಈ ತಂಡವನ್ನು ಸಿದ್ಧಪಡಿಸಲಾಗಿದೆ. ಹೆಲಿಕಾಪ್ಟರ್ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗಿದೆ.
ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ
ಎಎಲ್ಎಚ್ ಮಾದರಿಯ ಲಘು ಹೆಲಿಕಾಪ್ಟರ್ಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರೋಗಿಗಳನ್ನು ಸಾಗಣೆ ಮಾಡುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ.
ಕೇರಳದಲ್ಲಿ ಇದುವರೆಗೂ 386 ಕೊರೊನಾ ಪ್ರಕರಣಗಳು ದಾಖಲಾಗಿವೆ. 2 ಮೃತಪಟ್ಟಿದ್ದು, ಸೋಂಕು ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.