'ಲವ್ ಜಿಹಾದ್'ನಿಂದ ನಮ್ಮ ಯುವತಿಯರ ರಕ್ಷಿಸಿ: ಕೇರಳ ಕ್ರೈಸ್ತರ ಮೊರೆ
ತಿರುವನಂತಪುರ, ಜನವರಿ 16: 'ಲವ್ ಜಿಹಾದ್' ಇರುವುದು ಸತ್ಯ, ಕ್ರೈಸ್ತ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿ ಅವರ ಮತಾಂತರ ಮಾಡಿ ಇಸ್ಲಾಂ ಭಯೋತ್ಪಾದನೆಗೆ ಕಳಿಸಲಾಗುತ್ತಿದೆ ಎಂದು ಕೇರಳದ ಕ್ರೈಸ್ತ ಸಂಘಟನೆ ಆರೋಪಿಸಿದೆ.
ಸಿರೋ-ಮಲಬಾರ್ ಚರ್ಚ್ ಹೀಗೊಂದು ಹೇಳಿಕೆ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಕೇರಳದಿಂದ ಹೋಗಿ ಐಎಸ್ಐಎಸ್ ಭಯೋತ್ಪಾದನಾ ಸಂಘಟನೆ ಸೇರಿರುವ 21 ಮಂದಿ ಮಹಿಳೆಯರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕ್ರೈಸ್ತ ಯುವತಿಯರೇ ಆಗಿದ್ದಾರೆ ಎಂದು ಸಿರೋ-ಮಲಬಾರ್ ಚರ್ಚ್ ನ ಕಾರ್ಡಿನಲ್ ಜಾರ್ಜ್ ಅಲನ್ ಚೇರಿ ಹೇಳಿದ್ದಾರೆ.
ಮತ್ತೆ ಲವ್ ಜಿಹಾದ್ ಸದ್ದು: ಸಿಎಂ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ
'ಕೇರಳದಲ್ಲಿ ಲವ್ ಜಿಹಾದ್ ಇದೆ ಹಾಗೂ ಅದು ಸತ್ಯವಾಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಕೇರಳದಲ್ಲಿ ಹಲವು ಕ್ರಿಶ್ಚಿಯನ್ ಹೆಣ್ಣು ಮಕ್ಕಳನ್ನು ಕೊಲ್ಲಲಾಗಿದೆ, ಅಥವಾ ಐಸಿಸ್ಗೆ ಸೇರ್ಪಡೆಗೊಳಿಸಲಾಗಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಈ ವಿಷಯದ ಬಗ್ಗೆ ಗಮನವಹಿಸಿಲ್ಲ, ನಾವು ಈ ಬಗ್ಗೆ ದೂರುಗಳನ್ನು ನೀಡಿದ್ದರೂ ಸಹ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಕಾರ್ಡಿನಲ್ ಆರೋಪಿಸಿದ್ದಾರೆ.
ಕೇರಳ: ಬಿಜೆಪಿ ಸೇರಿದ ಹಾದಿಯಾ ತಂದೆ ಅಶೋಕನ್
ಕ್ರೈಸ್ತ ಸಂಘಟನೆಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇರಳ ಮುಸ್ಲಿಂ ಸಂಘಟನೆಗಳು ಮತ್ತು ಪಿಎಫ್ಐ, 'ಸಿಎಎ ವಿರುದ್ಧ ಸಂಘಟಿತ ಹೋರಾಟಕ್ಕೆ ಈ ರೀತಿಯ ಹೇಳಿಕೆಗಳು ಮಾರಕ' ಎಂದು ಹೇಳಿವೆ.