ಕೇರಳ: ವೈನಾಡುವಿನಲ್ಲಿ ಭೂಕುಸಿತ ಹಲವು ಮಂದಿ ಭೂಸಮಾಧಿ ಶಂಕೆ
ವೈನಾಡು, ಆಗಸ್ಟ್ 08: ಕೇರಳದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಇಂದು ಮೆಪ್ಪಾಡಿಯ ಪುತ್ತುಮಲ ಎಂಬಲ್ಲಿ ಗುಡ್ಡವೊಂದು ಗ್ರಾಮದ ಮೇಲೆ ಕುಸಿದ ಪರಿಣಾಮ ಹಲವರು ಭೂಸಮಾದಿ ಆಗಿದ್ದಾರೆ.
ಭಾರಿ ಮಳೆಯಿಂದ ಈ ಅನಾಹುತ ಸಂಭವಿಸಿದ್ದು, ಇಡೀಯ ಗುಡ್ಡವೇ ಗ್ರಾಮದ ಮೇಲೆ ಕುಸಿದ ಪರಿಣಾಮ ಹಲವು ಮಂದಿ ಭೂಸಮಾಧಿ ಆಗಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಮೆಪ್ಪಾಡಿಯ ಪುತ್ತುಮಲವು ವೈನಾಡಿನ ಗಡಿಭಾಗದಲ್ಲಿದ್ದು, ದೇವಸ್ಥಾನ, ಮಸೀದಿ, ಕೆಲವು ಮನೆಗಳು, ಕಾಫಿ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕರ ತಾತ್ಕಾಲಿಕ ಶೆಡ್ಡುಗಳು ಎಲ್ಲವೂ ಮಣ್ಣಿನ ಅಡಿ ಮುಚ್ಚಿಹೋಗಿದೆ.
ಈ ಪ್ರದೇಶವು ರಸ್ತೆಯಿಂದ ದೂರವಿದ್ದು, ಗುಡ್ಡ ಕುಸಿದ ಭಾಗದಲ್ಲಿ ದೊಡ್ಡ ಹೊಳೆಯೊಂದು ಸೃಷ್ಠಿಯಾಗಿದ್ದು, ರಕ್ಷಣಾ ಪಡೆಗಳು ಸ್ಥಳವನ್ನು ತಲುಪಲು ಆಗದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ವೈನಾಡ್, ಕಣ್ಣೂರು ಭಾಗಗಳಿಂದ ರಕ್ಷಣಾ ಪಡೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸಲಾಗುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಪ್ರಯತ್ನ ಮಾಡಲಾಗುತ್ತಿದೆ.
4 ಅಡಿ ನೀರು ಬಂದರೆ ಕಬಿನಿ ಭರ್ತಿ : ಹೇಗಿದೆ ಜಲಾಶಯಗಳ ಪರಿಸ್ಥಿತಿ
ಕೇರಳದ ಇಕ್ಕೋಡು, ಕುಯಿಕ್ಕೋಡು, ವೈನಾಡು ಮುಂತಾದ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ ಕೇರಳದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಏರ್ಪಟ್ಟು ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.