ಮುನ್ನಾರ್ ಭೂ ಕುಸಿತ: 12 ಸಾವು, 80ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ
ಮುನ್ನಾರ್, ಆ. 6: ಕೇರಳದ ಮುನ್ನಾರ್ ಟೀ ಎಸ್ಟೇಟ್ ನಲ್ಲಿ ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿದ್ದು, 12 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಎಸ್ಟೇಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 80 ಅಧಿಕ ಮಂದಿ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಡುಕ್ಕಿ ಜಿಲ್ಲೆಯ ರಾಜಮಾಲ ಎಂಬಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಭಾರಿ ಮಳೆಯ ಕಾರಣ, ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. 15ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳನ್ನು ಸ್ಥಳಕ್ಕೆ ಕಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿ ಶಾಮಕ ದಳ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಸದ್ಯಕ್ಕೆ 10 ಮಂದಿಯನ್ನು ರಕ್ಷಿಸಲಾಗಿದೆ. ಭೂ ಕುಸಿತ ಉಂಟಾದಾಗ 80 ಕ್ಕೂ ಅಧಿಕ ಮಂದಿ ಈ ಸ್ಥಳದಲ್ಲಿದ್ದರು ಎಂಬ ಮಾಹಿತಿಯಿದೆ. ಸದ್ಯಕ್ಕೆ ಮೂರು ಕುಟುಂಬ ಸಿಲುಕಿರುವುದು ಖಚಿತವಾಗಿದೆ ಎಂದು ಇಡುಕ್ಕಿ ಎಸ್ಪಿ ಹೇಳಿದ್ದಾರೆ.
Kerala: 5 people have lost their lives in a landslide at Rajamala in Idduki district; rescue operation underway.
— ANI (@ANI) August 7, 2020
Kerala Health Minister has said that a mobile medical team & 15 ambulances sent to the incident site. pic.twitter.com/yzxiRpfuyZ
ಕೇರಳದ ಎರ್ನಾಕುಲಂ, ಇಡುಕ್ಕಿ, ತ್ರಿಸ್ಸೂರ್, ಮಲಪ್ಪುರಂ, ಕೋಯಿಕ್ಕೊಂಡ್, ವಯನಾಡು,ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಳುವಾದ ಶಿವ ದೇಗುಲ ಮುಳುಗಿದ್ದು, ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.