ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೈ ನಿಧನ
ತಿರುವನಂತಪುರಂ, ಮೇ 3: ಹಿರಿಯ ರಾಜಕಾರಣಿ ಮತ್ತು ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೈ (87) ಸೋಮವಾರ (ಮೇ 3) ಮುಂಜಾನೆ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯಸ್ಸಿಗೆ ಸಂಬಂಧಿಸಿದ ಕಾಯಿಲೆ ಮತ್ತು ಮುಖ್ಯವಾಗಿ ಉಸಿರಾಟ ಸಮಸ್ಯೆಯ ಕಾಯಿಲೆ ಪಿಳ್ಳೈ ಅವರ ಸಾವಿಗೆ ಕಾರಣವೆಂದು ವೈದ್ಯರು ಹೇಳಿದ್ದಾರೆ. ಆರ್.ಬಾಲಕೃಷ್ಣ ಪಿಳ್ಳೈ ಅವರು ಶುಕ್ರವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ವೆಂಟಿಲೇಟರ್ ಸಹಾಯದ ಮೇಲೆ ಮತ್ತು ಪೂರಕ ಆಮ್ಲಜನಕವನ್ನು ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿಸಿತ್ತು. ಮುಂಜಾನೆ 3 ಗಂಟೆಗೆ ಅವರ ಸಾವಿನ ಸುದ್ದಿ ಬಂದಿತು.
ಸೋಮವಾರ ಸಂಜೆ ಕೊಟ್ಟರಕರದಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಂತಾಪ
ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೈ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದರು.
ಆರ್.ಬಾಲಕೃಷ್ಣ ಪಿಳ್ಳೈ ಅವರು ಕೇರಳ ರಾಜ್ಯ ಕಲ್ಯಾಣ ಆಯೋಗದ ಮುಂದುವರೆದ ಸಮುದಾಯಗಳ ಅಧ್ಯಕ್ಷರಾಗಿದ್ದರು. ಅವರು ಸಂಪುಟ ದರ್ಜೆ ಹುದ್ದೆಗಳನ್ನು ಅನುಭವಿಸಿದರು.
ಆರ್.ಬಾಲಕೃಷ್ಣ ಪಿಳ್ಳೈ ಅವರು ನಾಯರ್ ಸರ್ವಿಸ್ ಸೊಸೈಟಿಯ (ಎನ್ಎಸ್ಎಸ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದರು ಮತ್ತು ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಕೂಡಾ ಆಗಿದ್ದರು.
Recommended Video
ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್, ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು. ಪಿಳ್ಳೈ ಅವರು ಸಾಮಾಜಿಕ ಸಂಸ್ಥೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. "ಇದು ಎನ್ಎಸ್ಎಸ್ಗೆ ದುಃಖಕರ ದಿನ' ಎಂದರು.