ಬಸವ ಜಯಂತಿಗೆ ಕನ್ನಡದಲ್ಲಿ ಶುಭಕೋರಿದ ಕೇರಳ ಮುಖ್ಯಮಂತ್ರಿ
ಬೆಂಗಳೂರು, ಏಪ್ರಿಲ್ 26: ಮಹಾ ಶಿವಶರಣ, ಅನುಭವ ಮಂಟಪ ಸಂಸ್ಥಾಪಕ, ಕ್ರಾಂತಿಯೋಗಿ ಬಸವಣ್ಣ ಜಯಂತಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದ ದೇಶದ ಹಲವು ಪ್ರಮುಖರು ಶುಭಕೋರಿದ್ದಾರೆ.
ನೆರೆ ರಾಜ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಸವ ಜಯಂತಿಗೆ ಕನ್ನಡದಲ್ಲಿ ಶುಭಕೋರಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!
''ನಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ಬೆಳೆಯಲು ಬಸವಣ್ಣ ನಮಗೆ ಮಾರ್ಗದರ್ಶಿಯಾಗಲಿ. ನಾವು ಕೊರೊನಾ ವಿರುದ್ಧ ಪ್ರತ್ಯೇಕವಾಗಿ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ. ಈ ಸಾಂಕ್ರಾಮಿಕ ರೋಗವನ್ನು ಗೆಲ್ಲಲು ನಾವೆಲ್ಲ ಒಂದಾಗಿ ಹೋರಾಡಬೇಕಿದೆ'' ಎಂದು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ ಬಸವಣ್ಣ ಅವರ ವಚನದ ಸಾಲುಗಳನ್ನು ಕೂಡ ಬಳಸಿದ್ದಾರೆ.
#BasavaJayanti Greetings
— Pinarayi Vijayan (@vijayanpinarayi) April 26, 2020
Let the great Basavanna be our guide to transcend our differences. We will not win the battle against the pandemic by being divided. It takes all of us to win this.
"ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.
ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ." pic.twitter.com/vQPcWYLWbc
"ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.
ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ." ಎಂಬ ಸಾಲು ಬಳಸುವ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ವಿಶ್ವಗುರುವನ್ನು ಸ್ಮರಿಸಿದ್ದಾರೆ.
ಬಸವ ಜಯಂತಿ; ಸಮಾಜ ಸುಧಾಕರಣೆಯ ಆಶಯ ಪಾಲಿಸೋಣ
ಕೇರಳ ಮುಖ್ಯಮಂತ್ರಿ ಮಾತ್ರವಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಬಸವಣ್ಣ ಅವರನ್ನು ಸ್ಮರಿಸಿದ್ದಾರೆ.
ಮಹಾನ್ ಸಂತ, ಕವಿ ಮತ್ತು ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣ ಅವರ ಜಯಂತಿಯಂದು ನಾನು ಅವರಿಗೆ ಶಿರಬಾಗಿ ನಮಿಸುತ್ತೇನೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ದೃಢವಾಗಿ ಹೋರಾಡಿದ್ದ ಬಸವಣ್ಣನವರ ಬೋಧನೆಗಳು ಎಲ್ಲಾ ಗಡಿಗಳನ್ನೂ ಮೀರಿ ‘ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲು' ಎಂಬ ಸಂದೇಶವನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ. pic.twitter.com/DdYoigF2f0
— Amit Shah (@AmitShah) April 26, 2020
'ಮಹಾನ್ ಸಂತ, ಕವಿ ಮತ್ತು ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣ ಅವರ ಜಯಂತಿಯಂದು ನಾನು ಅವರಿಗೆ ಶಿರಬಾಗಿ ನಮಿಸುತ್ತೇನೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ದೃಢವಾಗಿ ಹೋರಾಡಿದ್ದ ಬಸವಣ್ಣನವರ ಬೋಧನೆಗಳು ಎಲ್ಲಾ ಗಡಿಗಳನ್ನೂ ಮೀರಿ 'ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲು' ಎಂಬ ಸಂದೇಶವನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ' ಎಂದು ಶುಭಾಶಯ ತಿಳಿಸಿದ್ದಾರೆ.