ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯ
ತಿರುವನಂತಪುರಂ, ಮೇ 31: ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯ ಕೈಗೊಂಡಿದೆ.
ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಪುಟ್ಟ ಲಕ್ಷದ್ವೀಪ ಪ್ರದೇಶ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಪ್ರವಾಸೋದ್ಯಮದ ಮೂಲಕ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ.
ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಲಕ್ಷದ್ವೀಪದಲ್ಲಿ ಪ್ರತಿಭಟನೆ
ಆದರೆ ಇದೀಗ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೊಳಿಸಿರುವ ನೀತಿಗೆ ತೀವ್ರ ವಿರೊಧ ವ್ಯಕ್ತವಾಗಿದೆ. ಅಲ್ಲದೇ ಕಾಂಗ್ರೆಸ್, ಸಿಪಿಎಂ ಸೇರಿದಂತೆ ವಿರೊಧ ಪಕ್ಷಗಳು ಲಕ್ಷದ್ವೀಪದಲ್ಲಿನ ಬೆಳವಣಿಗೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಹೀಗಿರುವ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆಯು ಪ್ರಫುಲ್ ಪಟೇಲ್ ಅವರನ್ನು ಉಚ್ಚಾಟನೆ ಮಾಡಲು ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾತನಾಡಿ, ಲಕ್ಷದ್ವೀಪ ಆಡಳಿತವು ಜನರ ಜೀವ ರಕ್ಷಿಸುವ ಮೂಲ ಜವಾಬ್ದಾರಿಯನ್ನು ಮರೆತು ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಲಕ್ಷದ್ವೀಪ ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಷದ್ವೀಪ ಮೀನುಗಾರಿಕಾ ಇಲಾಖೆಯ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲಾಗಿದೆ. ಈವರೆಗೆ 39 ಉದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರಾಕೃತಿಕ ಸೌಂದರ್ಯ, ಪ್ರವಾಸೋದ್ಯಮದ ಕೆಂದ್ರ ಬಿಂದುವಾಗಿರುವ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಡಿಸಿದ ನೂತನ ಪ್ರಸ್ತಾವನೆಗಳೇ ರಾಜಕೀಯ ಸ್ವರೂಪ ಪಡೆಯಲು ಕಾರಣವಾಗಿದ್ದಲ್ಲದೇ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ವಿವಾದಕ್ಕೆ ಕಾರಣವಾದ ಅಂಶಗಳು
-ಮುಸ್ಲಿಂ
ಸಮುದಾಯ
ಅಧಿಕವಾಗಿರುವ
ಲಕ್ಷದ್ವೀಪದಲ್ಲಿ
ಆಡಳಿತಾಧಿಕಾರಿ
ಪ್ರಫುಲ್
ಪಟೇಲ್
ಜಾರಿಗೆ
ತಂದಿರುವ
ನೀತಿ
ವಿವಾದಕ್ಕೆ
ಕಾರಣವಾಗಿದೆ
-ಮುಸ್ಲಿಂ
ಬಾಹುಳ್ಯದ
ಪ್ರದೇಶದಲ್ಲಿ
ಗೋ
ಮಾಂಸ
ಮಾರಾಟ
ನಿಷೇಧ
-ಅಪರಾಧ
ಪ್ರಕರಣ
ಕಡಿಮೆ
ಇರುವ
ದ್ವೀಪದಲ್ಲಿ
ಗೂಂಡಾ
ಕಾಯ್ದೆ
ಜಾರಿ
-ಇಬ್ಬರಿಗಿಂತ
ಹೆಚ್ಚು
ಮಕ್ಕಳನ್ನು
ಹೊಂದಿರುವ
ಪಂಚಾಯತ್
ಆಕಾಂಕ್ಷಿಗಳಿಗೆ
ಅನರ್ಹಗೊಳಿಸಬೇಕು
-ಅಭಿವೃದ್ಧಿ
ಯೋಜನೆಗಳಿಗಾಗಿ
ಖಾಸಗಿಯವರಿಂದ
ಭೂಮಿ
ವಶಪಡಿಸಿಕೊಳ್ಳಲು
ಅಭಿವೃದ್ಧಿ
ಪ್ರಾಧಿಕಾರ
ಸ್ಥಾಪನೆ
-ಲಕ್ಷದ್ವೀಪಾಭಿವೃದ್ಧಿ
ಪ್ರಾಧಿಕಾರ
2021
ರಚನೆ
-ಲಕ್ಷದ್ವೀಪದಲ್ಲಿ
ಮದ್ಯ
ಮಾರಾಟ
ನಿಷೇಧ
ತೆರವು
-ಶಾಲೆಗಳಲ್ಲಿ
ಮಧ್ಯಾಹ್ನದ
ಬಿಸಿಯೂಟದಲ್ಲಿ
ಮಾಂಸಾಹಾರ
ನಿಷೇಧ.