ಕೇರಳದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋ ಮ್ಯಾನ್ ಶ್ರೀಧರನ್ಗೆ ಮುನ್ನಡೆ
ತಿರುವನಂತಪುರಂ, ಮೇ 02: ಕೇರಳದಲ್ಲಿ ಬಿಜೆಪಿಯು ಎರಡು ಕ್ಷೇತ್ರಗಳನ್ನು ಮುನ್ನಡೆ ಕಾಯ್ದುಕೊಂಡಿದ್ದು, ವಿಶ್ವಾಸವನ್ನು ಹೆಚ್ಚಿದೆ.
ಮೆಟ್ರೋ ಮ್ಯಾನ್ ಇ ಶ್ರೀಧರನ್ ಪಾಲಕ್ಕಾಡ್ ಕ್ಷೇತ್ರದಲ್ಲಿ ಮುಂದಿದ್ದಾರೆ. ಈಗಿರುವ ಟ್ರೆಂಡ್ ಗಮನಿಸಿದರೆ ಶ್ರೀಧರನ್ ಮೂಲಕ ಬಿಜೆಪಿಯು ಪಾಲಕ್ಕಾಡ್ ಗೆಲ್ಲು ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
'ಮೆಟ್ರೋ ಮ್ಯಾನ್' ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ
ನೆಮೊಮ್ನಲ್ಲಿ ಕುಮ್ಮನಮ್ ರಾಜಶೇಖರನ್ ಮುಂದಿದ್ದಾರೆ. ಕೇರಳದಲ್ಲಿ 140 ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆದಿತ್ತು. ಇಂದು ಫಲಿತಾಂಶ ಹೊರಬೀಳಲಿದೆ.
ದಿಲ್ಲಿ ಮೆಟ್ರೋ ಸೇರಿದಂತೆ ದೇಶದ ಹಲವು ರೈಲು ಯೋಜನೆಗಳ ಹಿಂದಿನ ಚಾಲಕಶಕ್ತಿ ಇ ಶ್ರೀಧರನ್ ಫೆಬ್ರವರಿ 25 ರಂದು ಕೇಂದ್ರ ಸಚಿವ ಆರ್ಕೆ ಸಿಂಗ್ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು, ಬಿಜೆಪಿಯ ರಾಜ್ಯ ಚುನಾವಣಾ ಸಮಿತಿಯ 16 ಸದಸ್ಯರಲ್ಲಿ 88 ವರ್ಷದ ಶ್ರೀಧರನ್ ಕೂಡ ಒಬ್ಬರಾಗಿದ್ದಾರೆ.
Assembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ
ಇಂದು ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.