ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದವನಿಗೆ ಕೊರೊನಾ ಸೋಂಕು
ತಿರುವನಂತಪುರಂ, ಮೇ 24: ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು ಎಲ್ಲರನ್ನು ಅತಂಕಕ್ಕೀಡು ಮಾಡಿದೆ.
Recommended Video
ಕಾಸರಗೋಡಿನ ಆಟೋ ಚಾಲಕರಿಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಅವರ ತಲೆ ಮೇಲೆ ಹಲಸಿನ ಹಣ್ಣು ಬಿದ್ದಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಆರೋಗ್ಯ ತಪಾಸಣೆ ಮಾಡಿದಾಗ ಅವರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ.
ಉಡುಪಿಯಲ್ಲಿ ಕೊರೊನಾ ವೈರಸ್ ಮಹಾಸ್ಪೋಟ: 71ಕ್ಕೆ ಏರಿಕೆ
ಅವರು ಹಲಸಿನ ಕೊಯ್ಯಲು ತೆರಳಿದಾಗ ಒಂದು ಹಣ್ಣು ಅವರ ತಲೆಯ ಮೇಲೆ ಬಿದ್ದಿತ್ತು. ಜೊತೆಗೆ ಅವರ ಕೈಕಾಲುಗಳಲ್ಲೂ ಅಷ್ಟು ಶಕ್ತಿ ಇರಲಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂದಿದ್ದರು.
ಅವರಿಗೆ ಕೊರೊನಾ ಲಕ್ಷಣಗಳಿತ್ತು ಆದರೆ ಬೇರೆ ಊರುಗಳಿಗೆ ತೆರಳಿಲ್ಲ, ಬೇರೆ ಕಡೆಯಿಂದ ಬಂದವರ ಜೊತೆಯಲ್ಲೂ ಸಂಪರ್ಕದಲ್ಲಿಲ್ಲ. ಆದರೆ ಅವರು ಆಟೋ ಚಾಲಕರಾಗಿರುವುದರಿಂದ ಪ್ರಯಾಣಿಕರಿಂದ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಅವರ ಕುಟುಂಬವನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ 104 ಪ್ರಕರಣಗಳು ದಾಖಲಾಗಿವೆ.ಆದರೆ ಸಾಕಷ್ಟು ಮಂದಿಗೆ ಟ್ರಾವೆಲ್ ಹಿಸ್ಟರಿಯೂ ಇಲ್ಲ. ವಿದೇಶದಿಂದಲೂ ಬಂದಿಲ್ಲ.