ಕೇರಳದಲ್ಲಿ ಬಂಧಿತ ಉಗ್ರ ರಿಯಾಜ್ ಬಾಯ್ಬಿಟ್ಟ ಭಯಾನಕ ಸಂಗತಿಗಳು
ತಿರುವನಂತಪುರಂ,ಏಪ್ರಿಲ್ 30: ದೇವರನಾಡು ಕೇರಳದಲ್ಲೂ ಲಂಕಾ ಮಾದರಿಯಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸಲು ಐಎಸ್ಐಎಸ್ ಸಂಚು ನಡೆಸಿರುವುದು ಈಗ ಬಯಲಾಗಿದೆ.
ಐಎಸ್ಐಎಸ್ ಜೊತೆ ನಂಟು ಹೊಂದಿರುವ ರಿಯಾಜ್ ಎನ್ನುವ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಎನ್ಐಎ ಸೋಮವಾರವಾರ ಬಂಧಿಸಿದ್ದು ವಿಚಾರಣೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಶ್ರೀಲಂಕಾ ಸ್ಫೋಟ: 9 ದಾಳಿಕೋರರಲ್ಲಿ ಮಹಿಳೆ ಇರುವ ಕುರಿತು ಮಾಹಿತಿ
ಮುಸ್ಲಿಂ ಧರ್ಮ ಪ್ರಚಾರಕ ಝಾಕಿರ್ ನಾಯಕ್ ಹಾಗೂ ಶ್ರೀಲಂಕಾ ಉಗ್ರ ದಾಳಿಯ ಸಂಚುಕೋರ ಜೆಹ್ರನ್ ಹಶೀಮ್ ಭಾಷಣದಿಂದ ಪ್ರೇರಿತನಾಗಿದ್ದ ರಿಯಾಜ್ ಕೇರಳದಲ್ಲೂ ಅದೇ ಮಾದರಿಯ ದಾಳಿಯನ್ನು ನಡೆಸಲು ಹೊಂಚು ಹಾಕುತ್ತಿದ್ದ.
ಅಷ್ಟೇ ಅಲ್ಲದೆ ಈ ದಾಳಿ ಹಾಗೂ ಭಾರತದಲ್ಲಿ ಐಎಸ್ಐಎಸ್ ಕಾರ್ಯಾಚರಣೆ ಕುರಿತಂತೆ ಸಿರಿಯಾದಲ್ಲಿರುವ ಉಗ್ರರಾದ ಅಬ್ದುಲ್ ಖಯೂಮ್ ಜೊತೆಗೂ ಈತ ಮಾತುಕತೆ ನಡೆಸಿದ್ದ ಎನ್ನು ಮಾಹಿತಿ ಲಭ್ಯವಾಗಿದೆ.
ಶ್ರೀಲಂಕಾಕ್ಕೆ ನಿಂತಿಲ್ಲ ಬಾಂಬ್ ದಾಳಿ ಭೀತಿ: ಮತ್ತೆ ದಾಳಿಯ ಎಚ್ಚರಿಕೆ
ಹಶೀಮ್ ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ರಿಯಾಜ್ ಬಳಿ ಅಬ್ದುಲ್ಲಾ ಆಡಿಯೋ ಕ್ಲಿಪ್ ಕೂಡ ಲಭ್ಯವಾಗಿದೆ. ರಿಯಾಜ್ ಅಬ್ದುಲ್ಲಾ ಜೊತೆ ಆನ್ಲೈನ್ ಚಾಟ್ ನಡೆಸುತ್ತಿದ್ದ.