ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ಮತ್ತೆ ಓಪನ್
ತಿರುವನಂತಪುರಂ, ಸೆಪ್ಟೆಂಬರ್ 17: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ತೆರೆದಿದ್ದು, ಮತ್ತೊಮ್ಮೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಯ್ಯಪ್ಪ ದೇಗುಲದ ವಾರ್ಷಿಕ ಪಂಚಾಂಗದ ರೀತ್ಯ ಕನ್ನಿ ಮಾಸದ ಪೂಜೆಗಾಗಿ ಭಕ್ತರು ದೇಗುಲಕ್ಕೆ ತೆರಳಬಹುದಾಗಿದೆ. ಕೋವಿಡ್ 19 ಮಾರ್ಗಸೂಚಿ, ನಿಯಮಗಳು ಎಂದಿನಂತೆ ಜಾರಿಯಲ್ಲಿರಲಿವೆ. ಕೊರೊನಾ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಪ್ರವೇಶ ಸಿಗುವುದಿಲ್ಲ ಎಂದು ನಿಯಮವಿದೆ.
ಈ ಬಾರಿ ಕೇವಲ 15,000 ಮಂದಿ ಭಕ್ತರಿಗೆ ಮಾತ್ರ ದೇಗುಲಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 21ರ ತನಕ ಭಕ್ತರಿಗೆ ದೇಗುಲ ಮುಕ್ತವಾಗಿರುತ್ತದೆ. ಶಬರಿಮಲೆಗೆ ತೆರಳಲು ಬಯಸುವ ಭಕ್ತರು ಮುಂಚಿತವಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಪ್ರವೇಶ ಖಾತ್ರಿಪಡಿಸಿಕೊಳ್ಳಬೇಕು. 48 ಗಂಟೆಗಳ ಮುಂಚಿನ ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು.
2020ರ ಅಕ್ಟೋಬರ್ 16ರಂದು ಕಠಿಣ ನಿಯಮಗಳೊಂದಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿತ್ತು. ಕೇರಳದಲ್ಲಿ ಸದ್ಯ 1.99 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ಶೇ 68ರಷ್ಟು ಕೇರಳದಲ್ಲೇ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರದಂದು ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿಂದೆ ಮಾಸಿಕ ಆಚರಣೆಗಳಿಗಾಗಿ ದೇವಾಲಯವನ್ನು ತಿಂಗಳ ಕೆಲ ನಿರ್ದಿಷ್ಟ ದಿನಗಳಲ್ಲಿ ತೆರೆದರೂ ಕೋವಿಡ್-19 ನಿರ್ಬಂಧಗಳಿಂದಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ, ಜುಲೈ ತಿಂಗಳಲ್ಲಿ ತಿಂಗಳ ಐದು ದಿನಗಳ ಪೂಜೆ ನೆರವೇರಿಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಆನ್ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್
ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸೂಕ್ತ ಕೋವಿಡ್ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಾಲಯ ಆವರಣದಲ್ಲಿ ಭಕ್ತರ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.
ಆವರಣಗಳನ್ನು ಥರ್ಮಲ್ ಫಾಗಿಂಗ್ ಮೂಲಕ ಸೋಂಕು ಮುಕ್ತ
ಕೊವಿಡ್ 19 ಕಾರಣದಿಂದ ಈ ಬಾರಿ ಭಕ್ತರ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜೊತೆಗೆ ದೇಗುಲ ಪ್ರವೇಶವನ್ನು ನಿರ್ಬಂಧಿಸಿ, ಕಡಿಮೆ ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು. ಸನ್ನಿಧಿ ಹಾಗೂ ಆವರಣಗಳನ್ನು ಥರ್ಮಲ್ ಫಾಗಿಂಗ್ ಮೂಲಕ ಸೋಂಕು ಮುಕ್ತಗೊಳಿಸಲಾಗಿದೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರನ್ನೂ ಐಸೊಲೇಷನ್ ನಲ್ಲಿರಿಸಲಾಗುತ್ತದೆ. ಮಕರ ವಿಳಕ್ಕು ಅವಧಿಗೂ ಮುನ್ನವೇ ದೇಗುಲದ ಆದಾಯದಲ್ಲಿ 146 ಕೋಟಿ ರು ಕುಸಿತ ಕಂಡು ಬಂದಿತ್ತು. ದೇಗುಲದ ದೈನಂದಿನ ಖರ್ಚು ವೆಚ್ಚವೇ 50 ಲಕ್ಷ ರು ಮೀರುತ್ತದೆ.
ಪರಿಷ್ಕೃತ ಮಾರ್ಗಸೂಚಿಗಳು
ಪ್ರತಿದಿನ 5000ಕ್ಕೂ ಅಧಿಕ ಭಕ್ತರ ಪ್ರವೇಶ, ದರ್ಶನಕ್ಕೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶವನ್ನು ಕೇರಳ ಸರ್ಕಾರ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. 5000ಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವುದರಿಂದ ದೇಗುಲದ ಆದಾಯದಲ್ಲಿ ಅಂದಾಜು 50 ಲಕ್ಷ ರು ನಷ್ಟು ಏರಿಕೆ ಕಂಡು ಬಂದಿದೆ ಎಂದು ಮಂಡಳಿ ಅಧ್ಯಕ್ಷ ಎನ್ ವಾಸು ಹೇಳಿದ್ದಾರೆ.
*ಯಾತ್ರಿಕರು
ಆಗಾಗ್ಗೆ
ಕೈ
ತೊಳೆಯಬೇಕು,
ಸಾಮಾಜಿಕ
ದೂರವನ್ನು
ಕಾಪಾಡಿಕೊಳ್ಳಬೇಕು.
ಮಾಸ್ಕ್
ಗಳನ್ನು
ಕಡ್ಡಾಯವಾಗಿ
ಧರಿಸಬೇಕು.
ಪ್ರಯಾಣದ
ಸಮಯದಲ್ಲಿಯೂ
ಮುನ್ನೆಚ್ಚರಿಕೆ
ವಹಿಸಬೇಕು.
ತೀರ್ಥಯಾತ್ರೆಯುದ್ದಕ್ಕೂ
ಸ್ಯಾನಿಟೈಸರ್
ಅನ್ನು
ಜೊತೆಯಲ್ಲಿ
ಇಟ್ಟುಕೊಂಡಿರಬೇಕು.
*ಈ
ಹಿಂದೆ
ಕೊರೋನಾ
ತುತ್ತಾಗಿ
ಚೇತರಿಸಿಕೊಂಡಿರುವ
ಭಕ್ತರು
ಜ್ವರ,
ಕೆಮ್ಮು,
ಉಸಿರಾಟದ
ತೊಂದರೆ,
ಆಯಾಸ
ಮತ್ತು
ವಾಸನೆ
ಕಳೆದುಕೊಳ್ಳುವಂತಹ
ಲಕ್ಷಣಗಳು
ಇರುವವರು
ತೀರ್ಥಯಾತ್ರೆ
ಕೈಗೊಳ್ಳಬಾರದು.
*
ಶಬರಿಮಲೆಯಲ್ಲಿ
ಕರ್ತವ್ಯಕ್ಕೆ
ನಿಯೋಜಿಸಲಾದ
ಎಲ್ಲಾ
ಅಧಿಕಾರಿಗಳು
ಆರ್ಟಿ-ಪಿಸಿಆರ್
ಅಥವಾ
ಆರ್ಟಿ-ಲ್ಯಾಂಪ್
ಅಥವಾ
ಎಕ್ಸ್ಪ್ರೆಸ್
ನ್ಯಾಟ್
ಪರೀಕ್ಷೆಗೆ
ಒಳಗಾಗಬೇಕು.
ನೀಲಕ್ಕಲ್ನಲ್ಲಿ ಜನಸಂದಣಿಗೆ ಅವಕಾಶವಿಲ್ಲ
* ಯಾತ್ರಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು. ಕಡಿಮೆ ಸಂಖ್ಯೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಮೂಲಕ ಕೊರೋನಾ ವೇಗವಾಗಿ ಹರಡುವುದನ್ನು ತಪ್ಪಿಸಬಹುದು.
*
ಕನಿಷ್ಠ
6
ಅಡಿಗಳ
ಅಂತರವನ್ನು
ಕಾಪಾಡಿಕೊಳ್ಳಬೇಕು
ಮತ್ತು
ಮಾಸ್ಕ್
ಅನ್ನು
ಸರಿಯಾಗಿ
ಧರಿಸಬೇಕು.
*
ಯಾತ್ರಾರ್ಥಿಗಳ
ಜೊತೆಯಲ್ಲಿ
ಚಾಲಕರು,
ಕ್ಲೀನರ್ಗಳು
ಮತ್ತು
ಅಡುಗೆಯವರು
ಆರೋಗ್ಯ
ಇಲಾಖೆಯ
ಮಾರ್ಗಸೂಚಿಗಳನ್ನು
ಕಟ್ಟುನಿಟ್ಟಾಗಿ
ಪಾಲಿಸಬೇಕು.
*
ಭಕ್ತರು
ಮತ್ತು
ಕರ್ತವ್ಯದಲ್ಲಿರುವ
ಅಧಿಕಾರಿಗಳು
ಪ್ರತಿ
30
ನಿಮಿಷಗಳಿಗೊಮ್ಮೆ
ಕೈ
ತೊಳೆಯಬೇಕು
ಅಥವಾ
ಸ್ಯಾನಿಟೈಸರ್
ಬಳಸಬೇಕು.
*
ಕೊರೊನಾದಿಂದ
ಚೇತರಿಸಿಕೊಂಡಿರುವ
ಅಯ್ಯಪ್ಪನ
ಭಕ್ತರು
ತೀರ್ಥಯಾತ್ರೆಗೆ
ತೆರಳುವ
ಮೊದಲು
ದೈಹಿಕ
ಸಾಮರ್ಥ್ಯವನ್ನು
ಖಚಿತಪಡಿಸಿಕೊಳ್ಳಬೇಕು.
*
ಪಂಪಾ
ಮತ್ತು
ನೀಲಕ್ಕಲ್ನಲ್ಲಿ
ಜನಸಂದಣಿಗೆ
ಅವಕಾಶವಿಲ್ಲ.
ಬಳಕೆಯ
ನಂತರ
ಶೌಚಾಲಯಗಳನ್ನು
ಸ್ವಚ್ಛಗೊಳಿಸಬೇಕು.
ಗುಂಪು
ಗುಂಪಾಗಿ
ಬೆಟ್ಟವನ್ನು
ಇಳಿಯಬಾರದು.