ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಗುಡಿಸುತ್ತಿದ್ದಾಕೆ ಈಗ ಅದೇ ಪಂಚಾಯಿತಿಯಲ್ಲಿ ಅಧ್ಯಕ್ಷೆ!

|
Google Oneindia Kannada News

ತಿರುವನಂತಪುರಂ, ಜನವರಿ 2: ಸುಮಾರು ಹತ್ತು ವರ್ಷಗಳಿಂದ ದೂಳು ಹಿಡಿದ ಪಂಚಾಯಿತಿಯ ನೆಲ ಮತ್ತು ಕುರ್ಚಿ ಮೇಜುಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದ ಮಹಿಳೆ ಈಗ ಅದೇ ಪಂಚಾಯಿತಿ ಕಚೇರಿಯ ಅಧ್ಯಕ್ಷರ ಸೀಟಿನ ಮೇಲೆ ಕುಳಿತಿದ್ದಾರೆ. ಅಚ್ಚರಿ ಎನಿಸಿದರೂ ನಿಜ. ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿನ ಪಟ್ಟಣಪುರಂ ಎಂಬಲ್ಲಿ 46 ವರ್ಷದ ಎ. ಆನಂದವಲ್ಲಿ ಬ್ಲಾಕ್ ಪಂಚಾಯತ್‌ನ ಅಧ್ಯಕ್ಷೆ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಇದೇ ಕಚೇರಿಯಲ್ಲಿ ಅವರು ಅರೆಕಾಲಿಕ ಸ್ವಚ್ಛತಾ ಕೆಲಸಗಾರರಾಗಿ ದುಡಿಯುತ್ತಿದ್ದರು.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐಎಂ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಆನಂದವಲ್ಲಿ ಅವರು ಕಳೆದ ಬುಧವಾರ ಬ್ಲಾಕ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ದಲಿತ ಮಹಿಳೆ ಸುಮಾರು ಒಂದು ದಶಕದಿಂದ ಇಲ್ಲಿ ಕಸಗುಡಿಸಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಅವರ ಅದೃಷ್ಟ ಬದಲಾಗಿದೆ.

21 ವರ್ಷಕ್ಕೇ ಮೇಯರ್ ಚುಕ್ಕಾಣಿ ಹಿಡಿದ ಆರ್ಯ ರಾಜೇಂದ್ರನ್ ವ್ಯಕ್ತಿಚಿತ್ರ21 ವರ್ಷಕ್ಕೇ ಮೇಯರ್ ಚುಕ್ಕಾಣಿ ಹಿಡಿದ ಆರ್ಯ ರಾಜೇಂದ್ರನ್ ವ್ಯಕ್ತಿಚಿತ್ರ

'ನನ್ನ ಪಕ್ಷ ಮಾತ್ರವೇ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ' ಎಂದು ಬ್ಲಾಕ್ ಅಧ್ಯಕ್ಷೆಯಾಗಿ ಕುರ್ಚಿಯ ಮೇಲೆ ಕುಳಿತ ಬಳಿಕ ಆನಂದಬಾಷ್ಪದೊಂದಿಗೆ ಹೇಳಿದರು.

Anandavalli Who Worked As Sweeper At Pathanapuram Panchayat Office Is Now Its President

ಮಾರ್ಕ್ಸ್‌ವಾದಿ ಬೆಂಬಲಿಗರ ಕುಟುಂಬದಿಂದ ಬಂದ ಆನಂದವಲ್ಲಿ ಅವರು ಹೆಚ್ಚು ಕಲಿತವರಲ್ಲ. ಅವರ ಗಂಡ ವೃತ್ತಿಯಿಂದ ಪೈಂಟರ್. ಜತೆಗೆ ಸಕ್ರಿಯ ಸಿಪಿಐಎಂ ಕಾರ್ಯಕರ್ತ. 2011ರಲ್ಲಿ ಅರೆಕಾಲಿಕ ಕೆಲಸಗಾರ್ತಿಯಾಗಿ ಮಾಸಿಕ 2,000 ರೂ.ಗೆ ಕೆಲಸಕ್ಕೆ ಸೇರಿದ್ದರು. ಈಗ ಅವರಿಗೆ 6,000 ಮಾಸಿಕ ವೇತನ. ಜತೆಗೆ ತಮ್ಮ ಹಳೆಯ ಅರೆಕಾಲಿಕ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

English summary
A Andandavalli who was working as part time sweeper at Pathanapuram panchayat office is now become its president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X