ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ದೇಗುಲ ರಕ್ಷಣೆಗೆ ನಿಂತಿದ್ದ ರಾಹುಲ್ ಗೆ ಬಂಧನ ಭೀತಿ!

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 16: ಶಬರಿಮಲೆ ದೇಗುಲ ಪರ ನಿಂತಿದ್ದ ಬಲಪಂಥೀಯ ಸಂಘಟನೆ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ, ಅಯ್ಯಪ್ಪ ಧರ್ಮ ಸೇನಾ ಇದಕ್ಕೆ ವಿರೋಧ ವ್ಯಕ್ತಪಡಿಸಿ, ದೇಗುಲದ ರಕ್ಷಣೆಗೆ ನಿಂತುಕೊಂಡಿತ್ತು. ಪ್ರಗತಿಪರರು ಹಾಗೂ ಧರ್ಮಸೇನಾ ನಡುವಿನ ಸಂಘರ್ಷದ ನಡುವೆ ಉಂಟಾದ ಘರ್ಷಣೆಗೆ ರಾಹುಲ್ ಈಶ್ವರ್ ಅವರನ್ನು ಹೊಣೆ ಮಾಡಲಾಗಿದೆ.

Activist Rahul Easwars Bail Cancelled For Failing To Appear Before Cops

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅವರಿಗೆ ನೀಡಿದ ಜಾಮೀನನ್ನು ಕೇರಳ ಕೋರ್ಟ್ ಶನಿವಾರದಂದು ಹಿಂಪಡೆದಿದೆ. ಜಾಮೀನು ನೀಡುವಾಗ ಹಾಕಿದ್ದ ಷರತ್ತುಗಳ ಪೈಕಿ, ಪ್ರತಿದಿನ ಪಥನಥಿಟ್ಟ ಪೊಲೀಸ್ ಠಾಣೆಗೆ ಪ್ರತಿ ಶನಿವಾರದಂದು ಭೇಟಿ ನೀಡಬೇಕಿತ್ತು. ಆದರೆ, ಡಿಸೆಂಬರ್ 08ರಂದು ಪೊಲೀಸ್ ಠಾಣೆಗೆ ಭೇಟಿ ನೀಡಿರಲಿಲ್ಲ.

ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?

ಹೀಗಾಗಿ, ಈಶ್ವರ್ ಅವರನ್ನು ಮತ್ತೊಮ್ಮೆ ಬಂಧಿಸುವಂತೆ ಪಂಥನಥಿಟ್ಟ ಜಿಲ್ಲೆಯ ರನ್ನಿ ಕೋರ್ಟ್ ಆದೇಶಿಸಿದೆ. ಸೆಪ್ಟೆಂಬರ್ 28ರ ಸುಪ್ರೀಂಕೋರ್ಟ್ ಆದೇಶಕ್ಕೆ ಅಡ್ಡಿನಿಂತಿದ್ದರಿಂದ ರಾಹುಲ್ ಅವರನ್ನು ಬಂಧಿಸಲಾಗಿತ್ತು. ನಂತರ, ಷರತ್ತುಬದ್ಧ ಜಾಮೀನು ಪಡೆದಿದ್ದರು.

English summary
A Kerala court on Saturday revoked the bail granted to Ayyappa Dharma Sena leader Rahul Easwar for defying a bail condition in a case relating to violent protests in Sabarimala and directed the police to arrest him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X