ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ವಲಸೆ ಕಾರ್ಮಿಕರ ಗಲಾಟೆ, ಇಬ್ಬರು ಪೊಲೀಸರಿಗೆ ಗಾಯ

|
Google Oneindia Kannada News

ತಿರುವನಂತಪುರಂ, ಮೇ 11: ಕೇರಳ ಪೊಲೀಸರು ಮೇಲೆ ವಲಸೆ ಕಾರ್ಮಿಕರು ಕಲ್ಲು ತೂರಾಟ ನಡೆಸಿರುವ ಘಟನೆ ಭಾನುವಾರ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಕೇರಳದ ಒರುವತಿಲ್ಕೋಟ ಬಳಿ ಸುಮಾರು 700 ಜನ ವಲಸೆ ಕಾರ್ಮಿಕರು ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಿ ಎಂದು ಪ್ರತಿಭಟನೆ ನಡೆಸಿದರು. ಹೆಚ್ಚು ಜನ ಜಮಾಯಿಸಿದ್ದರಿಂದ ಪೊಲೀಸರು ಅವರನ್ನು ಶಾಂತಗೊಳಿಸಲು ಮುಂದಾದರು. ಆದರೆ, ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ವಲಸೆ ಕಾರ್ಮಿಕರ ಕಲ್ಲು ತೂರಾಟದಿಂದ ಇಬ್ಬು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಜೂನ್‌ 1ರವರೆಗೂ ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಮುಂದುವರಿಕೆ!ಜೂನ್‌ 1ರವರೆಗೂ ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಮುಂದುವರಿಕೆ!

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸುಮಾರು 700 ಜನರು ಸೇರಿದ್ದರು. ಇವರೆಲ್ಲರೂ ಕಟ್ಟಡ ಕಾರ್ಮಿಕರು. ಮನೆಗೆ ಹೋಗಲು ರೈಲು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಪೊಲೀಸರ ಮಾತು ಕೇಳದ ಕಾರ್ಮಿಕರು ಹಲ್ಲೆಗೆ ಮುಂದಾದರು ಎಂದು ಪೊಲೀಸ್ ಅಧಿಕಾರಿ.

2 Policemen Injured After Migrant Labourers Allegedly Pelted Stones

ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಬಳಿಕ, ವಲಸೆ ಕಾರ್ಮಿಕರ ಮನವಿಯನ್ನು ಪೊಲೀಸರು ಸ್ವೀಕರಿಸಿ ಸಮಾಧಾನಪಡಿಸಿದರು.

ಪ್ರಸ್ತುತ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಒಟ್ಟು 513 ಕೇಸ್ ದಾಖಲಾಗಿದೆ. ಅದರಲ್ಲಿ ಕೇವಲ 20 ಆಕ್ಟಿವ್ ಕೇಸ್ ಮಾತ್ರ ಬಾಕಿ ಇದೆ. ಉಳಿದ 489 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೂ ನಾಲ್ಕು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ.

English summary
Thiruvananthapuram: 2 policemen were injured after migrant labourers allegedly pelted stones at Police in Oruvathilkotta yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X