ಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರು
ತಿರುವನಂತಪುರಂ, ಮೇ 9: ಏರ್ ಇಂಡಿಯಾ ವಿಮಾನದಿಂದ ಭಾರತಕ್ಕೆ ಬಂದಿಳಿದ ಇಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Recommended Video
ಇಂದು ಕೊರೊನಾ ಪತ್ರಿಕಾ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಅಬುಧಾಬಿ ಹಾಗೂ ದುಬೈನಿಂದ ವಾಪಸ್ ಕರೆತಂದ 363 ಜನರಲ್ಲಿ ಇಬ್ಬರು ಭಾರತೀಯರಲ್ಲಿ ಇಬ್ಬರಿಗೆ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದಿದ್ದಾರೆ.
ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರು ಕೊಜ್ಹಿಕೊಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಕೊಚ್ಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಈ ಎರಡು ಹೊಸ ಕೊರೊನಾ ಪ್ರಕರಣಗಳಿಂದ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 505ಕ್ಕೆ ಏರಿಕೆಯಾಗಿದೆ. ಈ ಪೈಕಿ 484 ಜನರು ಗುಣಮುಖರಾಗಿದ್ದಾರೆ. 17 ಜನರು ಆಸ್ಪತ್ರೆಯಲ್ಲಿದ್ದಾರೆ. ನಾಲ್ಕು ಮಂದಿ ಮರಣ ಹೊಂದಿದ್ದಾರೆ.
''ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿರಿ''- ಕೊರೊನಾ ಬಗ್ಗೆ ಆರೋಗ್ಯ ಸಚಿವರ ಹೇಳಿಕೆ
ಗುರುವಾರ ಸಹ ಕೊಚ್ಚಿಗೆ ಬಂದ ವಿಮಾನದಲ್ಲಿ 181 ಜನರ ಪೈಕಿ 5 ಜನರಿಗೆ ಪಾಸಿಟಿವ್ ಕಂಡು ಬಂದಿತ್ತು. ಏರ್ ಇಂಡಿಯಾ ವಿಮಾನಗಳ ಜೊತೆಗೆ 698 ಭಾರತೀಯರನ್ನು ಮಾಲ್ಡೀವ್ಸ್ನಿಂದ ಕೊಚ್ಚಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಜಲಶ್ವಾ ಮೂಲಕ ಕರೆತರಲಾಗುತ್ತಿದೆ.