ವಿಳಂಬ ನೀತಿ ಸಂಸ್ಕೃತಿಯಿಂದ ದೇಶವನ್ನು ಹೊರ ತರುತ್ತೇವೆ: ಮೋದಿ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 3: ಜಮ್ಮು-ಕಾಶ್ಮೀರದ ಲೇಹ್ ನಲ್ಲಿ ಭಾನುವಾರ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸರಕಾರ ಕೆಲಸ ಮಾಡುತ್ತಿರುವ ವೇಗವೇ ಸಾಕ್ಷಿ. ಇದು ನಿಧಾನ ಗತಿಯ ಸಂಸ್ಕೃತಿ ನಂಬುವುದಿಲ್ಲ ಎಂದು ಅವರು ಹೇಳಿದರು.
"ನಮ್ಮ ಸರಕಾರ ವೇಗವಾಗಿ ಕೆಲಸ ಮಾಡುವುದನ್ನು ನಂಬುತ್ತದೆ. ಈ ದೇಶದಲ್ಲಿ ಎಲ್ಲ ಕೆಲಸ ನಿಧಾನಕ್ಕೆ ಮಾಡುವ ಸಂಸ್ಕೃತಿ ಇತ್ತು. ಇನ್ನು ಮುಂದಿನ ಐದು ವರ್ಷದಲ್ಲಿ ಈ ವಿಳಂಬ ನೀತಿಯ ಸಂಸ್ಕೃತಿಯಿಂದ ಸಂಪೂರ್ಣವಾಗಿ ದೇಶವನ್ನು ಹೊರಗೆ ತರಲು ಬಯಸುತ್ತೇನೆ. ನಾವು ಏನೆಲ್ಲ ಯೋಜನೆ ಆರಂಭಿಸುತ್ತೇವೋ ಅದನ್ನು ಅಂದುಕೊಂಡ ಸಮಯದೊಳಗೆ ಪೂರ್ಣಗೊಳಿಸಲು ನಮ್ಮ ಪ್ರಯತ್ನ ಹಾಕುತ್ತೇವೆ" ಎಂದು ಮೋದಿ ಹೇಳಿದ್ದಾರೆ.
ದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿ
ಈ ಯೋಜನೆಗಳ ಉದ್ಘಾಟನೆ ಮೂಲಕ ಈ ಪ್ರದೇಶದ ಸಂಪರ್ಕ ವ್ಯವಸ್ಥೆ, ಲಡಾಖ್ ನ ಪ್ರವಾಸೋದ್ಯಮ ವೃದ್ಧಿ ಆಗುತ್ತದೆ. ಇದರೊಂದಿಗೆ ಉದ್ಯೋಗಾವಕಾಶಗಳು ಸಹ ವೃದ್ಧಿ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಐದು ಹೊಸದಾದ ಚಾರಣ ಮಾರ್ಗ ಉದ್ಘಾಟನೆ ಮಾಡುವುದಾಗಿ ಹೇಳಿದ ಅವರು, ಈ ಮಾರ್ಗಗಳ ಮೂಲಕ ನಿಮ್ಮ ಪ್ರವಾಸದ ಅನುಭೂತಿ ಇನ್ನಷ್ಟು ಅದ್ಭುತವಾಗಿರುತ್ತದೆ ಎಂದಿದ್ದಾರೆ.
ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?
ಲಡಾಖ್ ಅಟಾನಮಸ್ ಹಿಲ್ ಡೆವಲಪ್ ಮೆಂಟ್ ಕೌನ್ಸಿಲ್ ಕಾಯ್ದೆಗೆ ಬದಲಾವಣೆ ತಂದ ಬಗ್ಗೆ ಮಾತನಾಡಿದ ಅವರು, ಸಂಬಂಧಪಟ್ಟ ವೆಚ್ಚದ ವಿಚಾರದಲ್ಲಿ ಕೌನ್ಸಿಲ್ ಗೆ ಹೆಚ್ಚು ಅಧಿಕಾರ ನೀಡಲಾಗಿದೆ. ಈ ಭಾಗದ ಅಭಿವೃದ್ಧಿಗೆ ನೀಡಲಾದ ಮೊತ್ತವನ್ನು ಈಗ ಅಟಾನಮಸ್ ಕೌನ್ಸಿಲ್ ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದಾರೆ.