ಪುಲ್ವಾಮಾದಲ್ಲಿ ಮತ್ತೆ ದಾಳಿಗೆ ಉಗ್ರರ ಸಂಚು, ಹೈ ಅಲರ್ಟ್ ಘೋಷಣೆ
ನವದೆಹಲಿ, ಜೂನ್ 16: ಒಂದೆಡೆ ಭಾರತ -ಪಾಕಿಸ್ತಾನ ಕ್ರಿಕೆಟ್ ವಿಶ್ವಕಪ್ ನಡೆಯಲಿದ್ದರೆ ಇನ್ನೊಂದೆಡೆ ಭಾರತಕ್ಕೆ ಗಡಿಯಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುವ ಎಲ್ಲಾ ಸಾಧ್ಯತೆ ಗೋಚರಿಸಿದೆ.
ಭಾರತ ಪಾಕಿಸ್ತಾನ ಗಡಿಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ, ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಬೃಹತ್ ಟ್ರಕ್ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕ್ ಬೇಹುಗಾರಿಕೆ ಅಧಿಕಾರಿಗಳು ಭಾರತ ಮತ್ತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾರೆ.
ಶ್ರೀನಗರದಲ್ಲಿ ಓರ್ವ ಜೈಷ್ ಉಗ್ರನನ್ನು ಸೆರೆ ಹಿಡಿದ ಭಾರತೀಯ ಸೇನೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ 2017ರಲ್ಲಿ ಪ್ರತ್ಯೇಕಗೊಂಡಿದ್ದ ಜಾಕೀರ್ ಮೂಸಾ ಅಲ್ಖೈದಾದ ಸಹ ಉಗ್ರ ಸಂಘಟನೆಯಾಗಿ ಘಜ್ವಾತ್ ಉಲ್ ಹಿಂದ್ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿದ್ದ. ಭದ್ರತಾಪಡೆಗಳು ಈತನನ್ನು ಹತ್ಯೆ ಮಾಡಿದ್ದವು.
ಳೆದ ತಿಂಗಳು ತ್ರಾಲ್ನಲ್ಲಿ ಹತನಾದ ಉಗ್ರ ಜಾಕೀರ್ ಮೂಸಾನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಈ ದಾಳಿಯ ಉದ್ದೇಶ ಎಂದು ಹೇಳಲಾಗಿದೆ.
ಪುಲ್ವಾಮಾ ದಾಳಿ ನಡೆದ 7 ಕಿ.ಮೀ. ದೂರದಲ್ಲಿದೆ. ಫೆಬ್ರವರಿ 14ರಂದು ಪುಲ್ವಾಮಾ ಬಳಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್ಪಿಎಫ್ನ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.