ಶ್ರೀನಗರದಲ್ಲಿ ಓರ್ವ ಜೈಷ್ ಉಗ್ರನನ್ನು ಸೆರೆ ಹಿಡಿದ ಭಾರತೀಯ ಸೇನೆ
ಶ್ರೀನಗರ, ಮೇ 14: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಉಗ್ರನೋರ್ವನನ್ನು ಭಾರತೀಯ ಸೇನೆ ಮಂಗಳವಾರ ಸೆರೆ ಹಿಡಿದಿದೆ.
ಪುಲ್ವಾಮಾ ಆತ್ಮಾಹುತಿ ದಾಳಿಗೆ ಕಾರಣರಾಗಿದ್ದ ಜೈಷ್ ಸಂಘಟನೆಯ ಉಗ್ರ ಅಬ್ದುಲ್ ಮಜೀದ್ ಬಾಬಾ ಅವರನ್ನು ದೆಹಲಿ ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.
ಶೋಪಿಯಾನ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದ ಸೇನೆ
ಸೋಪೋರ್ ಜಿಲ್ಲೆಯ ಮಗ್ರೆಪೋರಾ ದಲ್ಲಿ ಮಜೀದ್ ನನ್ನು ಬಂಧಿಸಿದ್ದು, ಈತನ ಸುಳಿವು ಕೊಟ್ಟವರಿಗೆ ಈ ಹಿಂದೆ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.
ಈ ಬಗ್ಗೆ ಮಾಹಿಚಿ ನೀಡಿರುವ ಡೆಪ್ಟುಟಿ ಕಮಿಷನರ್ ಆಫ್ ಪೊಲೀಸ್ ಸಂಜೀವ್ ಕುಮಾರ್ ಯಾದವ್ ಅವರು, ಶನಿವಾರ ಸಂಜೆ ಶ್ರೀನಗರದ ಸೌರಾದಲ್ಲಿ ಮಜೀದ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ಆತನನ್ನು ದೆಹಲಿಗೆ ಕರೆತಂದಿದ್ದು, ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ವಿವಿಧ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಜೈಷ್ ಉಗ್ರ ಅಬ್ದುಲ್ ಮಜೀದ್ ಬಾಬಾ ನನ್ನು ಬಂಧಿಸಲಾಗಿದೆ.