ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?

|
Google Oneindia Kannada News

ಶ್ರೀನಗರ, ಫೆಬ್ರವರಿ 16: 44 ಸೈನಿಕರ ಅಮೂಲ್ಯ ಜೀವವನ್ನು ಕಿತ್ತುಕೊಂಡ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಅದಿಲ್ ಅಹ್ಮದ್ ದಾರ್ ಮಾಡಿದ್ದು ತಪ್ಪೇ ಅಲ್ಲ ಎಂಬಂತೆ ಆತನ ತಂದೆ ತಾಯಿ ಮಾತನಾಡಿದ್ದಾರೆ.

ನೇರವಾಗಿ ಆತನ ನಡೆಯನ್ನು ಸಮರ್ಥಿಸಿಕೊಳ್ಳದಿದ್ದರೂ, ಆತ ಇವನ್ನೆಲ್ಲ ಮಾಡುವುದಕ್ಕೆ ಕಾರಣವಿದೆ ಎಂಬಂತೆ ಆತನ ಬೆನ್ನಿಗೆ ನಿಂತಿದ್ದಾರೆ.

12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ

"ಯೋಧರನ್ನು ಕಳೆದುಕೊಂಡ ಕುಟುಂಬಗಳು ಹೇಗೆ ದುಃಖಿಸುತ್ತಿವೆಯೋ ಅಷ್ಟೇ ದುಃಖ ನಮಗೂ ಆಗಿದೆ. ಆದರೆ ಆತ ಇವನ್ನೆಲ್ಲ ಮಾಡಿದ್ದರ ಹಿಂದೆ ಅವನಿಗಾದ ಅಪಾರ ನೋವು, ಅವಮಾನದ ಕತೆ ಇದೆ" ಕುಟುಂಬ ಹೇಳಿಕೊಂಡಿದೆ.

ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

ಫೆ.14 ರಂದು ಈತ ಸ್ಫೋಟಕ ತುಂಬಿದ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 44 ಯೋಧರು ಹುತಾತ್ಮರಾಗಿದ್ದರು. ಆತ್ಮಾಹುತಿ ದಾಳಿಕೋರ ದಾರ್, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯವನು ಎಂಬುದು ನಂತರ ದೃಢವಾಗಿತ್ತು. ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

2016 ರ ಆ ಘಟನೆ

2016 ರ ಆ ಘಟನೆ

2016 ರಲ್ಲಿ ಕಾಲೇಜು ಮುಗಿಸಿ ದಾರ್ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಕೆಲವು ಪೊಲೀಸರು ಆತನ್ನೂ ಮತ್ತು ಆತನ ಸ್ನೇಹಿತರನ್ನು ತಡೆದಿದ್ದರು. ಮಾತ್ರವಲ್ಲ ಅವರಿಗೆ ಹಲವು ಪ್ರಶFನೆಗಳನ್ನು ಕೇಳಿ, ಕಲ್ಲೆಸೆತದ ಪ್ರಕರಣದಲ್ಲಿ ನೀವೂ ಬಾಗಿಯಾಗಿದ್ದೀರಿ ಎಂದು ಆರೋಪಿಸಿದ್ದರು ಎಂದು ಆತನ ಪಾಲಕರು ಹೇಳಿದ್ದಾರೆ.

ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ? ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?

ಸಾಕಷ್ಟು ಅವಮಾನವಾಗಿತ್ತು ಆತನಿಗೆ!

ಸಾಕಷ್ಟು ಅವಮಾನವಾಗಿತ್ತು ಆತನಿಗೆ!

ಪೊಲೀಸರು ಆತನನ್ನು ತಡೆದಿದ್ದಲ್ಲದೆ, ಥಳಿಸಿ ಹಿಂಸಿಸಿದ್ದರು. ಕಲ್ಲೆಸೆತಕ್ಕೂ ತನಗೂ ಸಂಬಂಧವಿಲ್ಲ ಎಂದರೂ ಕೇಳದೆ, ಆತನನ್ನು ಚೆನ್ನಾಗಿ ಥಳಿಸಿದ್ದರು. ಇದರಿಂದ ಆತನಿಗೆ ಸಾಕಷ್ಟು ಅವಮಾನವಾಗಿತ್ತು. ಅಂದಿನಿಂದ ಆತ ಭಯೋತ್ಪಾದಕರೊಂದಿಗೆ ಸೇರಲು ನಿರ್ಧರಿಸಿದ ಎಂದು ಪಾಲಕರು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡಿದ್ದಾರೆ.

'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!

ಕಳೆದ ವರ್ಷದಿಂದ ಕಾಣೆಯಾಗಿದ್ದ!

ಕಳೆದ ವರ್ಷದಿಂದ ಕಾಣೆಯಾಗಿದ್ದ!

ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ಕಳೆದ ಮಾರ್ಚ್ 19 ರಂದು ಮನೆಯಿಂದ ಹೋದವನು ವಾಪಸ್ ಬರಲಿಲ್ಲ. ಮೂರು ತಿಂಗಳ ಕಾಲ ಆತನನ್ನು ಹುಡುಕಿದೆವು. ಆದರೆ ಆತ ಎಲ್ಲೂ ಸಿಗದ ಕಾರಣ ಸುಮ್ಮನಾದೆವು ಎಂಡು ದಾರ್ ತಾಯಿ ಫಹ್ಮೀದಾ ಹೇಳುತ್ತಾರೆ.

ಕೊಲೆಗಡುಕ ಆದಿಲ್ ಹತ್ತೇ ಕಿಮೀ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ!ಕೊಲೆಗಡುಕ ಆದಿಲ್ ಹತ್ತೇ ಕಿಮೀ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ!

ಘಟನೆ ಬಗ್ಗೆ ನಮಗೆ ಅರಿವಿರಲಿಲ್ಲ!

ಘಟನೆ ಬಗ್ಗೆ ನಮಗೆ ಅರಿವಿರಲಿಲ್ಲ!

ಮಗ ಮಿಲಿಟರಿ ಡ್ರೆಸ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋವನ್ನು ಜೈಷ್ ಇ ಮೊಹಮ್ಮದ್ ಬಿಡುಗಡೆ ಮಾಡಿದಾಗಲೇ ನಮಗೆ ಅವನು ಉಗ್ರನಾಗಿ ಬದಲಾಗಿದ್ದಾನೆ ಎಂಬುದು ತಿಳಿಯಿತು. ಆದರೆ ಆತ ಈ ದಾಳಿ ನಡೆಸುವ ಬಗ್ಗೆ ನಮಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ ಎಂದು ಪಾಲಕರು ಹೇಳಿದ್ದಾರೆ.

English summary
Parents of suicide bomber who killed at least 44 CPF troopers in Jammu and Kashmir's Pulwama told, he was radicalised after he was brutally thrashed by the security forces nearly three years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X