ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಶ್ರೀನಗರ, ಫೆಬ್ರವರಿ 14: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ(ಫೆಬ್ರವರಿ 14)ದಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದ್ ದರ್ ದಾಳಿ ಮಾಡಿ ಸಾಯುವುದಕ್ಕೂ ಮುನ್ನ ವಿಡಿಯೋ ಸಂದೇಶ ನೀಡಿದ್ದಾನೆ.
ಉರಿ ನಂತರದ ಭೀಕರ ದಾಳಿ; 30ಕ್ಕೆ ಏರಿತು ಹುತಾತ್ಮರಾದವರ ಸಂಖ್ಯೆ
ಉಗ್ರರ ದಾಳಿಯಲ್ಲಿ ಸುಮಾರು 30ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 45ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಾದ ಬಳಿಕ ಜೈಷ್ ಸಂಘಟನೆ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಕ್ಪೋರಾದ ಗಂಡಿಬಾಗ್ ನ ಆದಿಲ್ ಅಹ್ಮದ್ ದರ್ ಅಲಿಯಾಸ್ ವಖಾಸ್ ಕಮ್ಯಾಂಡೋ ಕಾಣಿಸಿಕೊಂಡಿದಾನೆ.
ಆದಿಲ್ ಹಿಂಬದಿಯಲ್ಲಿ ಜೈಷ್ ಎ ಮೊಹಮ್ಮದ್ ಬ್ಯಾನರ್ ಇದ್ದು, ರೈಫಲ್ಸ್ ಗಳನ್ನು ಹಿಡಿದುಕೊಂಡು ಮಾತನಾಡಿರುವ ಆದಿಲ್, ಕಳೆದ ವರ್ಷ ನಿಷೇಧಿತ ಉಗ್ರ ಸಂಘಟನೆಯನ್ನು ಸೇರಿಕೊಂಡೆ, ಈ ವರ್ಷ ಮಾರಣಾಂತಿಕ ದಾಳಿ ನಡೆಸುವ ಹೊಣೆ ಸಿಕ್ಕಿದೆ. ಈ ವಿಡಿಯೋ ಪ್ರಸಾರವಾಗುವ ವೇಳೆಗೆ ನಾನು ಜನ್ನತ್(ಸ್ವರ್ಗ)ದಲ್ಲಿರುತ್ತೇನೆ ಎಂದಿದ್ದಾನೆ.
The coward who struck at Pulwama pic.twitter.com/4SRSQQUarB
— Vicky Nanjappa (@vickynanjappa) February 14, 2019
ಪುಲ್ವಾಮದ ಉಗ್ರರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ
ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಎಲ್ ಇ ಡಿ ಸ್ಫೋಟಕ್ಕಾಗಿ ಜೈಷ್ ಸಿದ್ಧತೆ ನಡೆಸಿತ್ತು. 50ಕ್ಕೂ ಅಧಿಕ ಸಿ ಆರ್ ಪಿಎಫ್ ವಾಹನಗಳನ್ನು ಗುರಿಯನ್ನಾಗಿಸಿ ಈ ಕೃತ್ಯ ಎಸಗಲಾಗಿದೆ. ಪ್ರತಿ ವಾಹನದಲ್ಲೂ 40 ರಿಂದ 45 ಸೈನಿಕರಿದ್ದರು.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಬ್ಬಂದಿ ಹುತಾತ್ಮ
2016ರ ಸೆಪ್ಟೆಂಬರ್ ನಲ್ಲಿ ಉರಿ ಪ್ರದೇಶದಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನ ಸೇನಾ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿತ್ತು.