ಕದನ ವಿರಾಮ ಉಲ್ಲಂಘಿಸಿದ ಪಾಕ್: ಒಬ್ಬ ಭಾರತೀಯ ಯೋಧ ಹುತಾತ್ಮ
ಶ್ರೀನಗರ್,
ಸಪ್ಟೆಂಬರ್.15:
ಜಮ್ಮು
ಕಾಶ್ಮೀರದ
ರಜೌರಿ
ಜಿಲ್ಲೆಯ
ಗಡಿ
ನಿಯಂತ್ರಣ
ರೇಖೆಯುದ್ದಕ್ಕೂ
ಪಾಕಿಸ್ತಾನ
ಸೇನೆಯು
ಕದನ
ವಿರಾಮ
ಉಲ್ಲಂಘನೆ
ಮಾಡಿದೆ.
ಪಾಕಿಸ್ತಾನ
ಸೇನೆಯು
ನಡೆಸಿದ
ಗುಂಡಿನ
ದಾಳಿಯಲ್ಲಿ
ಒಬ್ಬ
ಭಾರತೀಯ
ಯೋಧ
ಹುತಾತ್ಮರಾಗಿದ್ದು,
ಒಬ್ಬ
ಅಧಿಕಾರಿ
ಸೇರಿದಂತೆ
ಇಬ್ಬರು
ಗಾಯಗೊಂಡಿದ್ದಾರೆ.
ಮಂಗಳವಾರ
ಸಂಜೆಯಿಂದಲೇ
ಪಾಕಿಸ್ತಾನದ
ಸೇನೆ
ಕಡೆಯಿಂದ
ಅಪ್ರಚೋದಿತ
ಶೆಲ್
ಮತ್ತು
ಗುಂಡಿನ
ದಾಳಿ
ನಡೆಸಲಾಯಿತು.
ರಜೌರಿ
ಜಿಲ್ಲೆಯ
ಸುಂದರ್
ಬಿನ್
ಸೆಕ್ಟರ್
ನಲ್ಲಿ
ನಡೆಸಿದ
ಗುಂಡಿನ
ದಾಳಿಗೆ
ಭಾರತೀಯ
ಸೇನೆಯು
ತಕ್ಕ
ಪ್ರತ್ಯುತ್ತರವನ್ನು
ನೀಡಿದೆ.
ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಅಧಿಕಾರಿ ಮತ್ತು ಒಬ್ಬ ಯೋಧರನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಒಂದು
ವರ್ಷದಲ್ಲಿ
3186
ಬಾರಿ
ಕದನ
ವಿರಾಮ
ಉಲ್ಲಂಘನೆ:
ಜಮ್ಮು
ಕಾಶ್ಮೀರ
ಗಡಿಯಲ್ಲಿ
ಕಳೆದ
ಒಂದು
ವರ್ಷದಲ್ಲೇ
ಪಾಕಿಸ್ತಾನ
ಸೇನೆಯು
3186
ಬಾರಿ
ಕದನ
ವಿರಾಮ
ಉಲ್ಲಂಘಿಸಿ
ಗುಂಡಿನ
ದಾಳಿ
ನಡೆಸಿದೆ
ಎಂದು
ಕೇಂದ್ರ
ಸರ್ಕಾರವು
ಸಪ್ಟೆಂಬರ್.14ರಂದಷ್ಟೇ
ಅಂಕಿ-ಅಂಶಗಳ
ಸಮೇತ
ಮಾಹಿತಿ
ನೀಡಿತ್ತು.
ಅಲ್ಲದೇ
ಜನವರಿ.01ರಿಂದ
ಆಗಸ್ಟ್.31ರ
ಅವಧಿಯಲ್ಲಿ
242
ಬಾರಿ
ಅಂತಾರಾಷ್ಟ್ರೀಯ
ಗಡಿ
ನಿಯಂತ್ರಣ
ರೇಖೆಯನ್ನು
ದಾಟಿರುವ
ಘಟನೆಗಳು
ನಡೆದಿವೆ
ಎಂದು
ಕೇಂದ್ರ
ಸರ್ಕಾರವು
ತಿಳಿಸಿದೆ.