ಜಮ್ಮುವಿನಲ್ಲಿ ಸೇನಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಚುನಾವಣಾಧಿಕಾರಿ
ಜಮ್ಮು ಮತ್ತು ಕಾಶ್ಮೀರ, ಏ.17: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕೆಲಸದಲ್ಲಿ ನಿರತರಾಗಿದ್ದ ಅಧಿಕಾರಿ ಮೇಲೆ ಸೇನಾಧಿಕಾರಿ ಹಲ್ಲೆ ನಡೆಸಿದ್ದಾರೆ ಎನ್ನುವ ದೂರು ಕೇಳಿಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ನೇಮಕವಾಗಿರುವ ಚುನಾವಣಾಧಿಕಾರಿ ಮೇಲೆ ಕೆಲವು ಸೇನಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನೆಮ್ಮದಿಯಿಂದ ಚುನಾವಣಾ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ದೂರಿದ್ದಾರೆ.
ನಮಗೂ ಈ ಪತ್ರಕ್ಕೂ ಸಂಬಂಧವಿಲ್ಲ ಎಂದ ಕೆಲವು ನಿವೃತ್ತ ಯೋಧರು
ಚುನಾವಣಾ ಕೆಲಸದಲ್ಲಿ ಅಡಚಣೆ ಮಾಡುತ್ತಿದ್ದಾರೆ ಅಂತಹ ಸೇನಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಖಾಜಿಗುಂಡ್ನ ಎಸ್ಎಚ್ಓ ಹಾಗೂ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆಯಲಾಗಿದೆ.
ಸೇನೆಯ ಕಾನ್ವಾಯ್ ಹೋಗುತ್ತಿದ್ದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಿಗೆ ಹೋಗಲು ಬಿಡದೆ ಸೇನಾಧಿಕಾರಿಗಳು ಅವರನ್ನು ತಡೆ ಹಿಡಿದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ.