ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ: ನಾಲ್ವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

|
Google Oneindia Kannada News

ಶೋಪಿಯಾನ್(ಜಮ್ಮು-ಕಾಶ್ಮೀರ), ನವೆಂಬರ್ 20: ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ ಭಾರತದ ಗಡಿಯೊಳಗೆ ನುಗ್ಗುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಇಂದು ಬೆಳಗ್ಗಿನ ಜಾವ ಆರಂಭವಾದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ದಾಳಿಗೆ ನಾಲ್ವರು ಭಯೋತ್ಪಾದಕರು ಮೃತರಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಅಮೃತಸರ ದಾಳಿ: ಶಂಕಿತರ ಅಸ್ಪಷ್ಟ ಚಿತ್ರ ಕ್ಯಾಮರಾದಲ್ಲಿ ಸೆರೆಅಮೃತಸರ ದಾಳಿ: ಶಂಕಿತರ ಅಸ್ಪಷ್ಟ ಚಿತ್ರ ಕ್ಯಾಮರಾದಲ್ಲಿ ಸೆರೆ

ನ.13 ರಂದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಭಾರತದೊಳಗೆ ನುಗ್ಗುತ್ತಿದ್ದ ಪಾಕ್ ಉಗ್ರನೋರ್ವನನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

Jammu and Kashmir encounter: Many terrorists gunned down by Indian army

ಅದಕ್ಕೂ ಮುನ್ನ ಪುಲ್ವಾಮಾದಲ್ಲೂ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರನ್ನು ಭಾರತೀಯ ಸೇನೆ ಸದೆಬಡಿದಿತ್ತು.

ಅಮೆರಿಕ ಅದ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್ಅಮೆರಿಕ ಅದ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್

ಭಾನುವಾರ ಪಂಜಾಬಿನ ಅಮೃತಸರದ ಆಶ್ರಮವೊಂದರಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ದೇಶದಾದ್ಯಂತ, ಅದರಲ್ಲೂ ಗಡಿಯಲ್ಲಿ ಸಾಕಷ್ಟು ಭದ್ರತೆಯನ್ನು ಕಲ್ಪಿಸಲಾಗಿದ್ದು, ಭಯೋತ್ಪಾದಕರನ್ನು ಸದೆಬಡಿಯಲಾಗುತ್ತಿದೆ.

English summary
Jammu Kashmir's Shopian encounter: Four terrorists have been gunned down by Indian security forces. Operation continues
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X