ಪಾಕಿಸ್ತಾನದಿಂದ ಮತ್ತೆ ಕದನವಿರಾಮ ಉಲ್ಲಂಘನೆ, ಭಾರತೀಯ ಯೋಧ ಹುತಾತ್ಮ
ಶ್ರೀನಗರ, ಆಗಸ್ಟ್ 23: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಪ್ರದೇಶದ ಗಡಿನಿಯಂತ್ರಣ ರೇಖೆ ಬಳಿ ಕದನವಿರಾಮ ಉಲ್ಲಂಘಿಸಿ, ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಕಣಿವೆ ರಾಜ್ಯದ ರಾಜೌರಿ ಜಿಲ್ಲೆಯಲ್ಲಿ ಇಂದು ಬೆಳಗ್ಗಿನಿಂದಲೂ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸುತ್ತಿತ್ತು. ಭಾರತೀಯ ಸೇನೆ ಆ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿತ್ತು. ಈ ಸಂದರ್ಭದಲ್ಲಿ ಏಕಾಏಕಿಯಾಗಿ ಪಾಕಿಸ್ತಾನ ಶೆಲ್ಲಿಂಗ್ ದಾಳಿ ನಡೆಸಿದ ಪರಿಣಾಮ ನಾಯ್ಕ್ ರಾಜಿಬ್ ಥಾಪಾ ಎಂದ ಯೋಧ ಹುತಾತ್ನರಾದರು.
Recommended Video
ಜಮ್ಮು ಕಾಶ್ಮೀರದಲ್ಲಿ ಪಾಕ್ ಗುಂಡಿಗೆ ಯೋಧ ರವಿ ರಂಜನ್ ಹುತಾತ್ಮ
ರಾಜಿಬ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಜಲಪೈಗುರಿ ಜಿಲ್ಲೆಯ ಮೆಖಾಪರದವರಾಗಿದ್ದು, ಪತ್ನಿ ಖುಷ್ಬು ಮಂಗಾರ್ ಥಾಪಾ ಅವರನ್ನು ಅಗಲಿದ್ದಾರೆ.
ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಸೈನಿಕ ಹುತಾತ್ಮ
ಆಗಸ್ಟ್
17
ರಂದು
ಅಪ್ರಚೋದಿತ
ಗುಂದಿನ
ದಾಳಿ
ಆರಂಭಿಸಿದ್ದ
ಪಾಕಿಸ್ತಾನಕ್ಕೆ
ಭಾರತೀಯ
ಸೇನೆ
ತಕ್ಕ
ಉತ್ತರ
ನೀಡಿತ್ತು.
ಈ
ಸಂದರ್ಭದಲ್ಲಿ
ಲಾನ್ಸ್
ನಾಯಕ್
ಸಂದೀಪ್
ಥಾಪಾ
ಎನ್ನುವವರು
ಹುತಾತ್ಮರಾಗಿದ್ದರು.
ಜಮ್ಮು
ಮತ್ತು
ಕಾಶ್ಮೀರಕ್ಕೆ
ಸಂವಿಧಾನದ
370
ನೇ
ವಿಧಿಯ
ಅಡಿಯಲ್ಲಿ
ನೀಡಲಾಗಿದ್ದ
ವಿಶೇಷ
ಸ್ಥಾನಮಾನವನ್ನು
ಭಾರತ
ಹಿಂಪಡೆದ
ನಂತರವೂ
ಶಾಂತವಾಗಿಯೇ
ಇರುವ
ಕಾಶ್ಮೀರ
ಕಣಿವೆಯಲ್ಲಿ
ಅಶಾಂತಿ,
ಹಿಂಸಾಚಾರ
ಉಂಟು
ಮಾಡಿ
ವಿಶ್ವದ
ಗಮನ
ಸೆಳೆಯಲು
ಪಾಕಿಸ್ತಾನ
ಪ್ರಯತ್ನಿಸುತ್ತಿದ್ದು,
ದಿನವೂ
ಗುಂಡಿನ
ದಾಳಿ
ನಡೆಸುತ್ತಲೇ
ಇದೆ.