ಜಮ್ಮು ಕಾಶ್ಮೀರ:ಇಂದಿನಿಂದ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಪುನರಾರಂಭ
ಶ್ರೀನಗರ, ಆಗಸ್ಟ್ 9: ಕಳೆದೊಂದು ವಾರದ ಆತಂಕದ ಬಳಿಕ ಮತ್ತೆ ಜಮ್ಮು ಕಾಶ್ಮೀರದಲ್ಲಿ ಶಾಲಾಕಾಲೇಜು ಹಾಗೂ ಸರ್ಕಾರಿ ಕಚೇರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜಮ್ಮು ಕಾಶ್ಮೀರದ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಳೆದ ಸೋಮವಾರದಿಂದ ರಜೆ ಘೋಷಿಸಲಾಗಿತ್ತು. ಸಂವಿಧಾನದ ವಿಧಿ 370ನ್ನು ರದ್ದುಪಡಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನವನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಈ ಕಸರತ್ತು ಮಾಡಿತ್ತು.
ಈ ನಡೆ ಬಗ್ಗೆ ಪ್ರತಿಪಕ್ಷಗಳು ಸಾಕಷ್ಟು ಟೀಕೆಯನ್ನು ವ್ಯಕ್ತಪಡಿಸಿದ್ದರು, ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಜನರ ಅಧಿಕಾರ ಮೊಟಕುಗೊಳಿಸಲಾಗುತ್ತಿದೆ ಎಂದು ಕೆಲ ನಾಯಕರು ಆತಂಕ ವ್ಯಕ್ತಪಡಿಸಿದ್ದರು.
ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಮ್ಮ ಸಶಸ್ತ್ರ ಪಡೆಗಳನ್ನು ಹಂತ ಹಂತವಾಗಿ ಹಿಂಪಡೆದು ರಾಜ್ಯದಲ್ಲಿ ಮತ್ತೆ ಸಾಮಾನ್ಯ ಸ್ಥಿತಿ ನಿರ್ಮಾಣ ಮಾಡುವುದು ಸರ್ಕಾರದ ಗುಡಿಯಾಗಿದೆ.
ಈ
ನಿಟ್ಟಿನಲ್ಲಿ
ಶೀಘ್ರ
ಕ್ರಮ
ಕೈಗೊಳ್ಳಲಾಗುವುದು
ಆದರೆ
ಸರ್ಕಾರದೊಂದಿಗೆ
ಜನರು
ಕೈಜೋಡಿಸಬೇಕು
ಎಂದು
ಮನವಿ
ಮಾಡಿದ್ದರು.
ಜಮ್ಮು
ಕಾಶ್ಮೀರದ
ಮುಖ್ಯ
ಕಾರ್ಯದರ್ಶಿ
ಹೊರಡಿಸಿರುವ
ಆದೇಶದಂತೆ
ಎಲ್ಲಾ
ಶಾಲಾ
ಕಾಲೇಜುಗಳು
ಶುಕ್ರವಾರದಿಂದ
ಆರಂಭವಾಗಲಿದೆ.
ಹಾಗೆ
ಎಲ್ಲಾ
ಸಿಬ್ಬಂದಿ
ಇಂದಿನಿಂದ
ಕಡ್ಡಾಯವಾಗಿ
ಸೇವೆಗೆ
ಹಾಜರಾಗಬೇಕು.ಅಗತ್ಯವಿದ್ದಲ್ಲಿ
ಎಲ್ಲಾ
ರೀತಿಯ
ಭದ್ರತೆಯನ್ನು
ನೀಡಬೇಕು.
ಯಾರೊಬ್ಬರು
ಸೇವೆಗೆ
ಗೈರಾಗುವಂತಿಲ್ಲ
ಎಂದು
ನಿರ್ದೇಶಿಸಿದ್ದಾರೆ.
ಜಮ್ಮು
ಕಾಶ್ಮೀರದಲ್ಲಿ
ಮತ್ತೆ
ಸಹಜ
ಸ್ಥಿತಿ
ನಿರ್ಮಾಣಕ್ಕೆ
ಕೇಂದ್ರ
ಸರ್ಕಾರದ
ಮೊದಲ
ಹೆಜ್ಜೆಯಾಗಿದೆ.