ಕಾಶ್ಮೀರದಲ್ಲಿ ಉಗ್ರರ ಸಂಹಾರಕ್ಕೆ ತ್ರಿಸೇನಾ ವಿಶೇಷ ಪಡೆ
ಜಮ್ಮು ಮತ್ತು ಕಾಶ್ಮೀರ, ನವೆಂಬರ್ 25: ಕಾಶ್ಮೀರವನ್ನು ಸಹಜ ಸ್ಥಿತಿಗೆ ಮರಳಿಸಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದೆ.
ಭೂ ಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ವಿಶೇಷ ದಳಗಳನ್ನು ಕಾಶ್ಮೀರ ಕಣಿವೆಯ ಕೆಲ ಪ್ರದೇಶಗಳಲ್ಲಿ ನಿಯೋಜಿಸಿದೆ.
ಕಳೆದ ಆಗಸ್ಟ್ 5ರಿಂದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಹಾಗೂ ಸ್ಥಳೀಯ ಸರ್ಕಾರಗಳು ಹರಸಾಹಸ ಪಡುತ್ತಿವೆ.
ಆದರೆ ರಾಜ್ಯಕ್ಕೆ ನುಗ್ಗಿರುವ ಭಯೋತ್ಪಾದಕರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ, ಎಲ್ಲೆಡೆ ಕರ್ಫ್ಯೂ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೇಜರ್ ಜನರಲ್ ಅಶೋಕ್ ಡಿಂಗ್ರಾ ನೇತೃತ್ವದ ಆರ್ಮಡ್ ಫೋರ್ಸಸ್ ಸ್ಪೆಷಲ್ ಆಪರೇಷನ್ ಡಿವಿಷನ್ ರೂಪಿಸಲಾಗಿದೆ.
ಈ
ವಿಶೇಷ
ಪಡೆಯು
ಉಗ್ರರ
ವಿರುದ್ಧ
ಜಂಟಿ
ಕಾರ್ಯಾಚರಣೆ
ನಡೆಸಲಿದೆ.ಈಗಾಗಲೇ
ಈ
ತಂಡವು
ಶ್ರೀನಗರ
ತಲುಪಿದ್ದು,
ಶೀಘ್ರವೇ
ಕೆಲಸ
ಆರಂಭಿಸುವ
ಸಾಧ್ಯತೆ
ಇದೆ.
ಈ
ಹಿಂದೆ
ಸಣ್ಣ
ಪ್ರಮಾಣದಲ್ಲಿ
ಈ
ರೀತಿಯ
ಕಾರ್ಯಾಚರಣೆ
ನಡೆಸಿದ್ದರೂ
ಪೂರ್ಣಾವಧಿ
ತ್ರಿ
ಸೇನಾ
ಜಂಟಿ
ಕಾರ್ಯಾಚರಣೆ
ಇದೇ
ಮೊದಲ
ಬಾರಿಯಾಗಿದೆ.
ಕಾಶ್ಮೀರದಲ್ಲಿ ಸಹಜಸ್ಥಿತಿ ನಿರ್ಮಾಣವು ಕೇಂದ್ರ ಸರ್ಕಾರದ ಪ್ರತಿಷ್ಠೆಯ ವಿಚಾರವಾಗಿದೆ. ವಿಶೇಷ ಸ್ಥಾನಮಾನ ಕಳೆದುಕೊಂಡ ಮೂರು ತಿಂಗಳಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಉದ್ಯಮಿಗಳು , ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೇಬುಹಣ್ಣನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದನ್ನು ಭಯೋತ್ಪಾದಕರು ಸುಟ್ಟು ಹಾಕಿದ್ದರು.