12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ
ಶ್ರೀನಗರ, ಫೆಬ್ರವರಿ 15 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪುರ್ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ರೂವಾರಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್.
ಆದಿಲ್ ಅಹ್ಮದ್ ದಾರ್ ಭಯೋತ್ಪಾದನಾ ಚಟುಟವಟಿಕೆಗಳ ಕುರಿತು ತಂದೆ ಗುಲಾಂ ದಾರ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪುತ್ರ ಆತ್ಮಾಹುತಿ ಬಾಂಬರ್ ಆಗಿದ್ದಾನೆ ಎಂಬ ಮಾಹಿತಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಂದ ತಿಳಿದಿತ್ತು.
ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!
'12ನೇ ತರಗತಿ ಪರೀಕ್ಷೆ ಬರೆಯಲು ಅವರು ಜಮ್ಮುವಿಗೆ ತೆರಳಿದ್ದ. ಬಳಿಕ ವಾಪಸ್ ಆಗಲಿಲ್ಲ. ಆತನ ಯಾವುದೇ ಚಟುವಟಿಕೆ ಕುರಿತು ಮಾಹಿತಿ ಇರಲಿಲ್ಲ' ಎಂದು ಗುಲಾಂ ದಾರ್ ಹೇಳಿದ್ದಾರೆ.
ಕೊಲೆಗಡುಕ ಆದಿಲ್ ಹತ್ತೇ ಕಿಮೀ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ!
ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ದಾಳಿಯಲ್ಲಿ ಆದಿಲ್ ಅಹ್ಮದ್ ದಾರ್ ಮೃತದೇಹ ಪತ್ತೆಯಾಗಿಲ್ಲ. ಆದ್ದರಿಂದ, ಕುಟುಂಬಸ್ಥರು ದುಃಖದಲ್ಲಿದ್ದಾರೆ. ಆದಿಲ್ ದೇಹ ಛಿದ್ರ ಛಿದ್ರವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಹೆಸರುಗಳು
ಸಿಆರ್ಪಿಎಫ್ ಜವಾನರು ಪ್ರಯಾಣಿಸುತ್ತಿದ್ದ ಬಸ್ಸಿಗೆ 300 ಕೆಜಿ ಸ್ಫೋಟಕ ತುಂಬಿದ್ದ ಎಸ್ಯುವಿ ವಾಹನವನ್ನು ತಂದು ಆದಿಲ್ ಅಹ್ಮದ್ ದಾರ್ ಡಿಕ್ಕಿ ಹೊಡೆಸಿದ್ದ. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ.
ಸ್ಫೋಟದ ಬಳಿಕ ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ದೇಹಗಳು ಛಿದ್ರವಾಗಿ ಬಿದ್ದಿದ್ದವು. ರಸ್ತೆಯ ತುಂಬಾ ರಕ್ತ ಹೆಪ್ಪುಗಟ್ಟಿತ್ತು. ನೀರಿನ ಗನ್ಗಳ ಸಹಾಯದಿಂದ ಯೋಧರು ರಸ್ತೆಯನ್ನು ಸ್ವಚ್ಛ ಮಾಡಿದ್ದಾರೆ.