ಐಪಿಎಲ್ ತೊರೆದು ಕೊವಿಡ್ 19 ಹೋರಾಟಕ್ಕೆ ಅಶ್ವಿನ್ ಸಾಥ್
ಚೆನ್ನೈ, ಏಪ್ರಿಲ್ 26: ಕೊವಿಡ್ 19 ನಡುವೆ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡೆ ಬಗ್ಗೆ ಪರ -ವಿರೋಧ ಚರ್ಚೆ ನಡೆದಿದೆ. ಈ ನಡುವೆ ಟೂರ್ನಮೆಂಟ್ ಮಧ್ಯದಲ್ಲೇ ಅನೇಕ ಆಟಗಾರರು ತಂಡ ತೊರೆಯುತ್ತಿದ್ದು, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಪಟ್ಟಿಗೆ ಹೊಸ ಸೇರ್ಪಡೆ.
I would be taking a break from this years IPL from tomorrow. My family and extended family are putting up a fight against #COVID19 and I want to support them during these tough times. I expect to return to play if things go in the right direction. Thank you @DelhiCapitals 🙏🙏
— Stay home stay safe! Take your vaccine🇮🇳 (@ashwinravi99) April 25, 2021
ಮುಂಬೈನಲ್ಲಿ ಕಠಿಣ ಕರ್ಫ್ಯೂ ಕೋವಿಡ್ ನಿಯಮಗಳಿದ್ದರೂ ಐಪಿಎಲ್ ಆಯೋಜನೆಗೆ ಅನುಮತಿ ಹೇಗೆ ನೀಡಲಾಗಿದೆ ಎಂದು ಅನೇಕರು ಪ್ರಶ್ನಿಸಿದ್ದರು. ಐಪಿಎಲ್ ವೇಳಾಪಟ್ಟಿ, ಕ್ರೀಡಾಂಗಣ ಬದಲಾವಣೆ ಬಗ್ಗೆ ಸುದ್ದಿ ಬಂದಿತ್ತು. ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೊವಿಡ್ 19 ಮಾರ್ಗಸೂಚಿ ನಡುವೆ ಮುಂಬೈನಲ್ಲಿ ಎಂದಿನಂತೆ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
Go well Ash. Hope your family and the whole situation in the country gets better soon.
— Irfan Pathan (@IrfanPathan) April 25, 2021
ಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿ
ಈಗ ಚೆನೈ, ಮುಂಬೈ ನಂತರ ಅಹಮದಾಬಾದ್ ಸ್ಟೇಡಿಯಂನಲ್ಲಿ ಎಂದಿನಂತೆ ಐಪಿಎಲ್ ಮುಂದುವರೆಯಲಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಅವರು ತಮ್ಮ ಕುಟುಂಬಸ್ಥರು ಕೊವಿಡ್ 19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಅವರ ಹೋರಾಟಕ್ಕೆ ನಾನು ಬೆಂಬಲ ನೀಡಬೇಕಾಗಿದೆ. ಐಪಿಎಲ್ನಿಂದ ನಾಳೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ, ಪರಿಸ್ಥಿತಿ ತಿಳಿಕೊಂಡರೆ ಮತ್ತೆ ಐಪಿಎಲ್ ಕಣಕ್ಕಿಳಿಯುತ್ತೇನೆ ಎಂದು ಟ್ವೀಟ್ ಮಾಡಿದ್ದೇನೆ.
It’s sad that you’ve decided to quit this years IPL for your family. IPL is greater than Covid. Now Think about all the other poor & underprivileged families suffering from corona. Imagine if all IPL players quit & support these poor families. Great sportsmanship, poor humanity.
— Joshua D'souza (@TheJoshuaDsouza) April 25, 2021
ಅಶ್ವಿನ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್, ನಿಮ್ಮ ಕುಟುಂಬಸ್ಥರು ಹಾಗೂ ಇಡೀ ದೇಶದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಆಶಿಸೋಣ ಎಂದಿದ್ದಾರೆ. ಅಶ್ವಿನ್ ಅವರ ನಿರ್ಧಾರ ಸೂಕ್ತವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು ಡೆಲ್ಲಿ ತಂಡದ ಆಡುವ ಹನ್ನೊಂದರಲ್ಲಿ ಅಶ್ವಿನ್ ಸ್ಥಾನ ಪಡೆಯುವುದು ಕಷ್ಟಕರ ಸ್ಥಿತಿ ಇದೆ ಹೀಗಾಗಿ, ತಂಡ ತೊರೆಯುತ್ತಿರಬಹುದು ಎಂದಿದ್ದಾರೆ.