ರೆಸ್ಲರ್ ಕೊಲೆ ಪ್ರಕರಣ: ಸುಶೀಲ್ ಕುಮಾರ್ ಮನವಿಯನ್ನು ತಿರಸ್ಕರಿಸಿದ ಕೋರ್ಟ್
ನವದೆಹಲಿ, ಜೂನ್ 9: ಯುವ ರೆಸ್ಲರ್ನ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮನವಿಯನ್ನು ದೆಹಲಿ ಕೋರ್ಟ್ ತಿರಸ್ಕರಿಸಿದೆ. ಬಂಧನದ ಅವಧಿಯಲ್ಲಿ ತನಗೆ ವಿಶೇಷ ಆಹಾರ ನೀಡುವಂತೆ ಮನವಿಯನ್ನು ಮಾಡಿದ್ದರು. ಈ ಮನವಿಯನ್ನು ದೆಹಲಿ ಕೋರ್ಟ್ ನಿರಾಕರಿಸಿದೆ. ಸುಶೀಲ್ ಕುಮಾರ್ ಬೇಡಿಕೆಗಳು 'ಅತ್ಯಗತ್ಯವಾದ ಅಥವಾ ಅವಶ್ಯಕವಲ್ಲ' ಎಂದು ಕೋರ್ಟ್ ಹೇಳಿದೆ.
ನ್ಯಾಯಧೀಶರಾದ ಸತ್ವಿರ್ ಸಿಂಗ್ ಲಂಬಾ "ಆಪಾದಿತ ವಿಶೇಷ ಆಹಾರಗಳ ಬೇಡಿಕೆಯನ್ನು ಸಲ್ಲಿಸಿರುವುದು ಆರೋಪಿಯ ಆಸೆ ಮತ್ತು ಬಯಕೆಯಂತೆ ಮಾತ್ರ ಎಂದು ತೋರುತ್ತಿದೆ. ಯಾವುದೇ ರೀತಿಯ ವಿಶೇಷ ಆಹಾರ ಅಗತ್ಯ ಅಥವಾ ಅವಶ್ಯಕತೆಗಳು ಇಲ್ಲ"ಎಂದಿದ್ದಾರೆ. ದೆಹಲಿ ಕಾರಾಗೃಹ ನಿಯಮ 2018ರ ಪ್ರಕಾರ ಆರೋಪಿಗಳ ಮೂಲಭೂತ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಜೈಲಿನಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಸುಶೀಲ್ ಕುಮಾರ್ಗೆ ವಿಶೇಷ ಆಹಾರಗಳನ್ನು ನೀಡಲು ಅರ್ಜಿಯಲ್ಲಿ ಸುಶೀಲ್ ಪರ ವಕೀಲ ಪ್ರದೀಪ್ ರಾಣಾ ಮನವಿ ಮಾಡಿದ್ದರು. ಇದರಲ್ಲಿ ಪ್ರೋಟೀನ್, ಒಮೆಗಾ 3 ಕ್ಯಾಪ್ಸುಲ್ಗಳು, ಜಾಯಿಂಟ್ಮೆಂಟ್ ಕ್ಯಾಪ್ಸುಲ್ಗಳು, ಪೂರ್ವ-ತಾಲೀಮು ಸಿ 4 ಮತ್ತು ಹೈಡ್, ಮಲ್ಟಿವಿಟಮಿನ್ ಜಿಎನ್ಸಿ, ವ್ಯಾಯಾಮ ಬ್ಯಾಂಡ್ಗಳು ಮುಂತಾದ ಸಪ್ಲಿಮೆಂಟ್ಗಳನ್ನು ನೀಡಲು ಮನವಿಯನ್ನು ಮಾಡಲಾಗಿತ್ತು. ವೃತ್ತಿಪರ ಕುಸ್ತಿಪಟುವಾಗಿರುವ ಸುಶೀಲ್ ಕುಮಾರ್ಗೆ ಈ ಮೂಲಭೂತ ಅವಶ್ಯಕತೆಗಳನ್ನು ನಿರಾಕರಿಸುವುದರಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಮೇ 4ರಂದು ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಹತ್ಯೆ ನಡೆದಿತ್ತು. ಘಟನೆ ನಡೆದ ರಾತ್ರಿ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು. ನಂತರ ಮೇ 23 ರ ಬೆಳಿಗ್ಗೆ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ದೆಹಲಿ ಪೊಲೀಸರು 10 ದಿನಗಳ ಕಾಲ ವಿಚಾರಣೆಯನ್ನು ನಡೆಸಿದ್ದರು. ಜೂನ್ 2ರಂದು ದೆಹಲಿ ಜಿಲ್ಲಾ ನ್ಯಾಯಾಲಯ ಸುಶೀಲ್ ಕುಮಾರ್ಗೆ 9 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.