ಉತ್ತರಕನ್ನಡದಲ್ಲಿ ಇಬ್ಬರನ್ನು ಬಲಿ ಪಡೆದ ಮಂಗನ ಕಾಯಿಲೆ
ಸಿದ್ದಾಪುರ, ಜನವರಿ, 22: ಉತ್ತರ ಕನ್ನಡದಲ್ಲಿ ಮಂಗನಕಾಯಿಲೆ ಮತ್ತೆರೆಡು ಬಲಿ ಪಡೆದಿದೆ. ತಾಲೂಕಿನ ವಂದಾನೆ ಸಮೀಪದ ಬಾಳಗೋಡು ಗ್ರಾಮದಲ್ಲಿ ಸೋಮವಾರ ಒಂದೇ ದಿನ ಇಬ್ಬರು ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾರೆ.
ಮಲೆನಾಡಲ್ಲಿ ಮಂಗನ ಕಾಯಿಲೆ ಸವಾಲು: 43 ಮಂದಿಯಲ್ಲಿ ಸೋಂಕಿನ ಶಂಕೆ
ಸೂರ್ಯಕಾಂತ ಗಣಪತಿ ಹೆಗಡೆ(3), ಸಾವಿತ್ರಿ ಹಸ್ಲರ್ ಮೃತರು. ಸೂರ್ಯಕಾಂತ ಹೆಗಡೆ ಅವರಿಗೆ ಕೆಲವು ದಿನಗಳಿಂದ ಜ್ವರ, ಮೈಕೈ ನೋವು ಕಾಣಿಸಿಕೊಂಡಿತ್ತು, ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಾವಿತ್ರಿ ಹಸ್ಲರ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಮಂಗನ ಕಾಯಿಲೆಯ ಮಾಹಿತಿ ವಿನಿಮಯಕ್ಕೆ ವಾಟ್ಸಪ್ ಗ್ರೂಪ್
ಅದೇ ಗ್ರಾಮದ ಗಣಪ ಎನ್ನುವವರಿಗೂ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಳಗೋಡು ಸಮೀಪ ಮಂಗಳಗಳು ಸಾವನ್ನಪ್ಪಿದ್ದು ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
English summary
The death toll due to Kyasanur Forest Disease (KFD) in various villages under Aralagodu gram panchayat in Sagar taluk has increased to 11 with two more deaths in Siddapura taluk of Uttarakannada district on monday.
Story first published: Tuesday, January 22, 2019, 8:59 [IST]