ಭಾರೀ ಮಳೆಗೆ ಒಡೆದ ಚಿಗಳ್ಳಿ ಚೆಕ್ ಡ್ಯಾಮ್; ಮತ್ತೆ ಶುರುವಾಗಿದೆ ಆತಂಕ
ಶಿರಸಿ, ಆಗಸ್ಟ್ 12: ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಚೆಕ್ ಡ್ಯಾಮ್ ಕುಸಿದು ಅಪಾರ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಇದರಿಂದ ಮತ್ತೆ ಆತಂಕ ಶುರುವಾಗಿದೆ.
ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ನಿರಾಳರಾಗಿ, ಗಂಜಿ ಕೇಂದ್ರಗಳಿಂದ ಮನೆಗಳಿಗೆ ವಾಪಸ್ ಆಗುತ್ತಿದ್ದವರಿಗೆ ಈ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಒಡ್ಡು ಕುಸಿದಿರುವುದರಿಂದ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿವೆ. ಜಲಾಶಯದ ಸಮೀಪಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಪಿಕಪ್
ವಾಹನ-
ಕಾರು
ಅಪಘಾತ;
ಎಬಿವಿಪಿ
ಮುಖಂಡ
ಸೇರಿ
ಮೂವರು
ಸಾವು
20.74
ಮೀ.
ಎತ್ತರ,
910
ಮೀ.
ಅಗಲ
ಇರುವ
ಈ
ಜಲಾಶಯದ
ನೀರು
ಬೇಡ್ತಿನದಿ
ಹಾಗೂ
ಗಂಗಾವಳಿಯನ್ನು
ಸೇರುತ್ತದೆ.
ಹೀಗಾಗಿ
ಈ
ನದಿಗಳ
ನೀರಿನ
ಹರಿವಿನಲ್ಲಿ
ಮತ್ತೊಮ್ಮೆ
ಏರಿಕೆಯಾಗುವ
ಸಾಧ್ಯತೆ
ಇದೆ
ಎನ್ನಲಾಗಿದೆ.
ಜಲಾಶಯದ
ನೀರು
ಹರಿದರೆ,
ಶಿರಸಿ-ಹುಬ್ಬಳ್ಳಿ
ರಸ್ತೆ
ಜಲಾವೃತವಾಗಲಿದೆ.
2009ರಲ್ಲಿ ಕೂಡ ಜಲಾಶಯ ಒಡೆದಿತ್ತು. ಅದರ ನಂತರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.