ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ವೃಕ್ತಿ ಬಲಿ
ತೀರ್ಥಹಳ್ಳಿ: ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಜನವರಿಯಲ್ಲಿ ಒಬ್ಬರು ಮೃತರಾದ ಬೆನ್ನಲೇ ಮತ್ತೊಬ್ಬ ವ್ಯಕ್ತಿ ಮೃತರಾಗಿರುವ ಘಟನೆ ವರದಿಯಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯ ಬೆಕ್ಸೆ-ಕೆಂಜಿಗುಡ್ಡೆ ಗ್ರಾಮದ ಕುಡುಪ (65) ಎನ್ನುವವರು ಮಂಗನಕಾಯಿಲೆಯಿಂದ ಮಂಗಳವಾರ ಅಸುನೀಗಿರುವುದು ಇಲ್ಲಿನ ಕಾಡಿನಂಚಿನ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.[ಬಂಡೀಪುರ ಅಭಯಾರಣ್ಯದಲ್ಲಿ ಮಂಗನ ಕಾಯಿಲೆ?]
ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿಯ ಚಿಡುವ ಗ್ರಾಮದಲ್ಲಿ ಶೇಷಪ್ಪನಾಯ್ಕ ಎನ್ನುವವರು ಜನವರಿ 30ರಂದು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಈಗ ಕುಡುಪ ಎನ್ನುವವರು ಮೃತವಾಗಿದ್ದಾರೆ. ಪದೇ ಪದೇ ಜ್ವರದಿಂದ ನರಳುತ್ತಿದ್ದ ಕುಡುಪ ಅವರು ಇದ್ದಕ್ಕಿದಂತೆ ಜ್ವರ ಹೆಚ್ಚಾಗಿ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲಿಯೇ ಅಸುನೀಗಿದ್ದಾರೆ.
ಇನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕುಡುಪ ಅವರು ಮೃತವಾಗಿರುವುದನ್ನು ದೃಢಪಡಿಸಿದ ಪೊಲೀಸರು, ಮೃತವಾಗಿರುವುದಕ್ಕೆ ಮಂಗನ ಕಾಯಿಲೆ ಕಾರಣವಿರಬಹುದು ಎಂದು ತಿಳಿಸಿದ್ದಾರೆ.