ಭದ್ರಾವತಿಯ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಪತ್ತೆ
ಶಿವಮೊಗ್ಗ, ಜೂನ್ 14: ಭದ್ರಾವತಿಯ ಸಿದ್ಧರೂಢ ಬಡಾವಣೆಯಲ್ಲಿ ಶೃಂಗೇರಿ ಶಂಕರ ಮಠದ ಬಳಿಯಿರುವ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
Recommended Video
ಯಡಿಯೂರಪ್ಪನನ್ನ
ಅಲುಗಾಡಿಸಲು
ಯಾರಿಂದಲೂ
ಆಗಲ್ಲ
|
State
Government
is
safe
dont
worry
:
M
P
Renukacharya
ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಮೃತದೇಹಗಳು ಈ ಯುಜಿಡಿಯ ಬಾವಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯನ್ನು ಹಳೆನಗರ ನಿವಾಸಿ ಭಾಗ್ಯಮ್ಮ (40) ಎಂದು ಗುರುತಿಸಲಾಗಿದೆ. ಆದರೆ ಪುರುಷನ ದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಇಬ್ಬರೂ ಸಾವನ್ನಪ್ಪಿ ನಾಲ್ಕೈದು ದಿನಗಳು ಕಳೆದಿರಬಹುದು ಎನ್ನಲಾಗಿದೆ. ಇಬ್ಬರ ಮೃತದೇಹವೂ ನಿನ್ನೆ ರಾತ್ರಿ ಪತ್ತೆಯಾಗಿದೆ. ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ; ಸುತ್ತಾಡಲು ಹೋಗಿದ್ದ ನವದಂಪತಿ ಶವವಾಗಿ ಪತ್ತೆ
ಮೃತದೇಹಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಅನೈತಿಕ ಚಟುವಟಿಕೆ, ಕುಡಿತ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆಯೂ ಮಾತುಗಳು ಕೇಳಿಬಂದಿವೆ.
Comments
English summary
Two dead bodies found in UGD purification plant near Sringeri Sankara Mutt of bhadravathi
Story first published: Sunday, June 14, 2020, 13:20 [IST]