ಸಿಎಂ ಗುಣಮುಖರಾಗಲು ಶಿವಮೊಗ್ಗ ತಮಿಳು ಸಮಾಜದಿಂದ ವಿಶೇಷ ಪೂಜೆ
ಶಿವಮೊಗ್ಗ, ಆಗಸ್ಟ್ 05: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆದಷ್ಟು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬರಲಿ ಎಂದು ಹಾರೈಸಿ ಶಿವಮೊಗ್ಗ ತಮಿಳು ಸಮಾಜದಿಂದ ಇಂದು ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
Recommended Video
ಸಮುದಾಯ ಭವನದ ಗಣಪತಿ ದೇವಸ್ಥಾನದಲ್ಲಿ ಇಂದು ಸಮಾಜದ ಸದಸ್ಯರು ಸಿಎಂ ಗುಣಮುಖರಾಗಲೆಂದು ಹೋಮವನ್ನು ಹಮ್ಮಿಕೊಂಡು, ಪ್ರಾರ್ಥನೆಯನ್ನು ಸಲ್ಲಿಸಿದರು. ಎರಡು ದಿನಗಳ ಹಿಂದಷ್ಟೇ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ತಿಳಿಯುತ್ತಿದ್ದಂತೆ, ಅವರು ಶೀಘ್ರ ಗುಣಮುಖಲಾಗಲೆಂದು ವಿವಿಧ ಜಿಲ್ಲೆಗಳಲ್ಲಿ ಕಾರ್ಯಕರ್ತರು, ಪಕ್ಷದ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದರು. ಪ್ರಮುಖ ರಾಜಕೀಯ ಮುಖಂಡರೂ ಸಿಎಂ ಗುಣಮುಖರಾಗಲೆಂದು ಹಾರೈಸಿದ್ದರು.
ಶಿವಮೊಗ್ಗ: ಯಡಿಯೂರಪ್ಪ, ಸಿದ್ದರಾಮಯ್ಯ ಗುಣಮುಖರಾಗಲು ಕಾಂಗ್ರೆಸ್ ನಿಂದ ವಿಶೇಷ ಪೂಜೆ
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಡಿ. ರಾಜಶೇಖರ್, ಉಪಾಧ್ಯಕ್ಷ ಎನ್. ಮಂಜುನಾಥ್, ಹಿರಿಯರು ಮುಖಂಡರಾದ ಎಂ.ಪಿ. ಸಂಪತ್ತು, ತಮಿಳು ಸಂಘದ ಕಾರ್ಯದರ್ಶಿಗಳಾದ ದಂಡಪಾಣಿ, ಯುವ ಮುಖಂಡರಾದ ಗಣೇಶ್, ಎಸ್. ಮಂಜುನಾಥ ಉಪಸ್ಥಿತರಿದ್ದರು.