ನಿಂತಿದ್ದ ಬಸ್ಗೆ ಏಕಾಏಕಿ ಬೆಂಕಿ; ಸುಟ್ಟು ಕರಕಲಾದ ಬಸ್
ಶಿವಮೊಗ್ಗ, ಡಿಸೆಂಬರ್ 24: ಮನೆಯ ಮುಂದೆ ನಿಲ್ಲಿಸಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ನ ಟೈರ್ ಗಳು ಹೊರತುಪಡಿಸಿ ಇತರೆ ಭಾಗಗಳು ಸುಟ್ಟು ಕರಕಲಾಗಿವೆ.
ಶಿವಮೊಗ್ಗದ ಗುರುವಿನಪುರದಲ್ಲಿ ರವಿಕುಮಾರ್ ಎಂಬುವರಿಗೆ ಸೇರಿದ ಖಾಸಗಿ ಬಸ್, ಕೊರೊನಾ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಮನೆಯ ಎದುರಿನಲ್ಲಿಯೇ ನಿಲ್ಲಿಸಲಾಗಿತ್ತು.
ಶಿವಮೊಗ್ಗ; ಬ್ರಿಟನ್ನಿಂದ ವಾಪಸ್ ಆದ ನಾಲ್ವರಿಗೆ ಕೋವಿಡ್ ಸೋಂಕು
ಗುರುವಾರ ಮಧ್ಯಾಹ್ನ 12:30 ರ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ನ ಕೆಲ ಭಾಗಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದೇ ಗೊಂದಲವುಂಟಾಗಿದೆ. ಈ ಬಸ್ ಕೋವಿಡ್ ಆರಂಭಕ್ಕೂ ಮೊದಲು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸಂಚಾರ ಮಾಡುತ್ತಿತ್ತು.
ಬೆಳಗ್ಗೆ ಸುಮಾರು 8:30 ರ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿತ್ತು. ಮಧ್ಯಾಹ್ನ 12:30 ರ ವೇಳೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಬಸ್ ನ ಕೆಲ ಗ್ಲಾಸ್, ಕಿಟಕಿಯ ಬೀಡಿಂಗ್, ಫ್ಲಾಟ್ ಫಾರಂ ಸೀಟುಗಳು ಬೆಂಕಿಗೆ ಕರಕಲಾಗಿವೆ.
ತಕ್ಷವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಮಾಲೀಕರು ಅಗ್ನಿಶಾಮಕ ದಳದವರು ಬೆಂಕಿ ಆರಿಸಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಬಸ್ ಮಾಲೀಕ ರವಿಕುಮಾರ್ ತಿಳಿಸಿದರು.
ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ಬಸ್ಗೆ ಬೆಂಕಿ ತಗುಲಿದ ಬಗ್ಗೆ ಪೊಲೀಸರಿಂದ ತನಿಖೆ ಕೈಗೊಳ್ಳಬೇಕಿದೆ.