ಸಿದ್ದರಾಮೋತ್ಸವ ಮಾಡಿದ್ದೇ ಡಿಕೆಶಿಯ ಮೇಕೆದಾಟು ಪಾದಯಾತ್ರೆಗೆ ಸೆಡ್ಡು ಹೊಡೆಯಲು: ವಿಜಯೇಂದ್ರ
ಶಿವಮೊಗ್ಗ, ಆಗಸ್ಟ್ 9: ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಸಿದ್ದರಾಮಯ್ಯ ಸಿದ್ದರಾಮೋತ್ಸವ ಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ್ದ ವಿಜಯೇಂದ್ರ, ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಆ ಪಕ್ಷದಲ್ಲಿ ಆಂತರಿಕ ಕಲಹಗಳಿವೆ, ನ್ಯೂಟನ್ ನಿಯಮದಂತೆ ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತಿದ್ದು, ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದು ನಿಮಗೆ ತಿಳಿಯಲಿದೆ. ಆದರೆ ಕಾಂಗ್ರೆಸ್ ಬಗ್ಗೆಯಾಗಲಿ, ಅವರ ಕಾರ್ಯಕ್ರಮಗಳ ಬಗ್ಗೆಯಾಗಲಿ ಬಿಜೆಪಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಬಗ್ಗೆ ಕೇಳಿದ್ದಕ್ಕೆ , ಶಿಕಾರಿಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮನವಿನ ಮಾಡಿದ್ದಕ್ಕೆ ನಮ್ಮ ತಂದೆಯವರು ನಾನು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಅದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನಾನೇನು ರಾಜಕೀಯದಲ್ಲಿ ಶಾಸಕನಾಗಲೂ ಅಥವಾ ಎಂಎಲ್ಸಿಯಾಗಲೂ ಇದೆಲ್ಲಾ ಮಾಡುತ್ತಿಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಇಲ್ಲಿ ಪ್ರವಾಸ ಮಾಡಿದ್ದೆ, ಮುಂದೆಯೂ ಮಾಡುತ್ತೇನೆ ಎಂದರು.
ಭವಿಷ್ಯದ
ಬಗ್ಗೆ
ಚಿಂತೆಯಿಲ್ಲ
ರಾಜ್ಯದ
ಬಿಜೆಪಿ
ಉಪಾಧ್ಯಕ್ಷನಾಗಿ
ಕೆಲಸ
ಮಾಡುತ್ತಿದ್ದೇನೆ.
ಪಕ್ಷವನ್ನು
ಸಂಘಟನೆ
ಮಾಡಲು
ನನಗೆ
ನೀಡಿರುವ
ಜವಾಬ್ದಾರಿಯನ್ನು
ಪ್ರಾಮಾಣಿಕವಾಗಿ
ನಿರ್ವಹಿಸುತ್ತಿದ್ದೆನೆ.
ನನಗೆ
ಅದರಲ್ಲಿ
ಸಂತೃಪ್ತಿ
ಇದೆ.
ಬರುವಂತಹ
ದಿನಗಳಲ್ಲಿ
ಏನಾಗುತ್ತದೆ
ಅಥವಾ
ನಾನು
ಏನಾಗುತ್ತೇನೆ
ಎಂಬುದರ
ಬಗ್ಗೆ
ತಲೆ
ಕೆಡಿಸಿಕೊಳ್ಳುವುದಿಲ್ಲ.
ಬಿಜೆಪಿ
ರಾಷ್ಟ್ರೀಯ
ಪಕ್ಷ.
ಈಗಾಗಿ
ವಿಜಯೇಂದ್ರ
ಯಾವಾಗ
ಚುನಾವಣೆಗೆ
ಸ್ಪರ್ಧೆ
ಮಾಡಬೇಕು
ಎಂಬುದನ್ನು
ಪಕ್ಷದ
ನಾಯಕರು
ತೀರ್ಮಾನಿಸಲಿದ್ದಾರೆ
ಎಂದು
ತಿಳಿಸಿದರು.
20
ಕೋಟಿ
ಮನೆಗಳಲ್ಲಿ
ಧ್ವಜ
ಹಾರಿಸುವ
ಗುರಿ
ಪ್ರಧಾನ
ಮಂತ್ರಿ
ನರೇಂದ್ರ
ಮೋದಿ
ಸ್ವಾಂತಂತ್ರ್ಯದ
ಅಮೃತ
ಮಹೋತ್ಸವವನ್ನು
ದೊಡ್ಡ
ಹಬ್ಬವಾಗಿ
ಆಚರಿಸಲು
ಕರೆ
ನೀಡಿದ್ದಾರೆ.
ನಾವು
ಅದನ್ನು
ಪಾಲಿಸಲು
ಸಿದ್ಧರಾಗಿದ್ದೇವೆ.
ಇದರ
ಕುರಿತು
ಪೇಜ್
ಪ್ರಮುಖರ
ಸಭೆ
ನಡೆಸಿದ್ದು,
ಯುವಕರಲ್ಲಿ
ದೇಶಭಕ್ತಿ
ಹೆಚ್ಚಿಸಲು
ಹಬ್ಬದ
ರೀತಿ
ಸ್ವಾತಂತ್ರ್ಯ
ದಿನಾಚರಣೆಯನ್ನು
ಆಚರಿಸಲು
ಕರೆ
ನೀಡಲಾಗಿದೆ.
ಸುಮಾರು
20
ಕೋಟಿ
ಮನೆಗಳ
ಮೇಲೆ
ಧ್ವಜ
ಹಾರಾಡಲಿವೆ.
ರಾಜ್ಯದಲ್ಲಿ
58,000
ಬೂತ್ಗಳು,
311
ಮಂಡಲಗಳು,
2500
ಶಕ್ತಿ
ಕೇಂದ್ರ
ಮತ್ತು
ಮಹಾಶಕ್ತಿ
ಕೇಂದ್ರಗಳಿವೆ.
ಈ
ಎಲ್ಲ
ಕೇಂದ್ರಗಳಲ್ಲಿ
ನಾವು
ತ್ರಿವರ್ಣ
ಧ್ವಜ
ಹಾರಿಸಲಾಗುತ್ತದೆ
ಎಂದರು.