ಬಿಜೆಪಿಗೆ ಮೋದಿ ನಾಯಕ, ಸಿದ್ದರಾಮಯ್ಯ ಅಲ್ಲ: ಜಾರಕಿಹೊಳಿಗೆ ಈಶ್ವರಪ್ಪ ಕ್ಲಾಸ್
ಶಿವಮೊಗ್ಗ, ಡಿಸೆಂಬರ್ 17: 'ಸಿದ್ದರಾಮಯ್ಯ ನನ್ನ ಗುರುಗಳು' ಎಂದಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ರಮೇಶ್ ಜಾರಕಿಹೊಳಿ ತೆರಳಿದ್ದಾಗ, 'ಸಿದ್ದರಾಮಯ್ಯ ನನ್ನ ಗುರುಗಳು' ಎಂದು ಹೇಳಿದ್ದರು. ಇದರ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ಷೇಪ ಎತ್ತಿದ್ದಾರೆ.
ಮೂಲ ಬಿಜೆಪಿ, ವಲಸೆ ಬಿಜೆಪಿ... ಹೀಗೆಲ್ಲಾ ಏನೂ ಇಲ್ಲ; ಕೆ.ಎಸ್ ಈಶ್ವರಪ್ಪ
'ಬಿಜೆಪಿ ಗೆ ನರೇಂದ್ರ ಮೋದಿ ನಾಯಕ, ಸಿದ್ದರಾಮಯ್ಯ ಅಲ್ಲ' ಎಂದು ಖಾರವಾಗಿಯೇ ಈಶ್ವರಪ್ಪ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
'ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಬಿಜೆಪಿ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸಿದ್ದರಾಮಯ್ಯ ಎಂದಿಗೂ ನಮ್ಮ ನಾಯಕ ಅಲ್ಲ, ಬಿಜೆಪಿ ಸೇರಿದ ಬಳಿಕ ರಮೇಶ್ ಜಾರಕಿಹೊಳಿ ಈ ಸತ್ಯವನ್ನು ತಿಳಿಯಬೇಕಿತ್ತು' ಎಂದು ಅಸಮಾಧಾನದ ಮಾತುಗಳನ್ನು ಆಡಿದ್ದಾರೆ.
ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರು: ಈಶ್ವರಪ್ಪ
ಬಿಜೆಪಿ ಸೇರಿರುವ ಮಾಜಿ ಅನರ್ಹರ ವಿರುದ್ಧ ಒಬ್ಬೊಬ್ಬರಾಗಿ ಮೂಲ ಬಿಜೆಪಿಗರು ಒಬ್ಬೊಬ್ಬರಾಗಿ ಅಸಮಾಧಾನ ಹೊರಹಾಕುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ಕುರಿತ ಹೇಳಿಕೆಯನ್ನು ಮುಂದಿಟ್ಟುಕೊಂಡು ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಅರೆ, ರಾಜಕಾರಣ ಅಲ್ಲ ಸ್ವಾಮಿ, ಇದು 'ಹೃದಯ'ಗಳ ವಿಷಯ!
ಸಿದ್ದರಾಮಯ್ಯ ಆರೋಗ್ಯ ಸರಿಯಿಲ್ಲದಾಗ ಈಶ್ವರಪ್ಪ ಸಹ ಆರೋಗ್ಯ ವಿಚಾರಣೆಗೆ ತೆರಳಿದ್ದರು. ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದ್ದರು. ಅಲ್ಲದೇ 'ಸಿದ್ದರಾಮಯ್ಯ-ನಾನು ಸಾಯುವ ವರೆಗೂ ಮಿತ್ರರು' ಎಂದು ಹೇಳಿದ್ದರು.