ಶಿವಮೊಗ್ಗ; ಕಾಡಲ್ಲಿ ಪ್ರಿಯತಮೆ ಕೊಂದು ವಿಷ ಕುಡಿದ ಪ್ರಿಯಕರ!
ಶಿವಮೊಗ್ಗ, ಆಗಸ್ಟ್ 27; ಪ್ರಿಯಕರ ಪ್ರೀತಿಸಿದ ಯುವತಿಯನ್ನು ಕೊಲೆಗೈದು, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ಪೇಟೆ ಸಮೀಪದ ನೇರಲಿಗೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಶಿವಮೊಗ್ಗದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (22) ಎಂಬಾಕೆಯನ್ನು ಆಕೆಯ ಸ್ನೇಹಿತ ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶಿವಮೂರ್ತಿ ಕೊಲೆ ಮಾಡಿದ್ದಾನೆ.
ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ: ಯುವತಿಯ ಧರಣಿ
ಪ್ರಿಯತಮೆ ಕೊಂದ ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ. ಸ್ನೇಹಿತರ ಮೂಲಕ ವಿಚಾರ ತಿಳಿದು ಕುಟುಂಬದವರು ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮನೆಯಲ್ಲಿಯೇ 10 ವರ್ಷಗಳ ಕಾಲ ಪ್ರೇಯಸಿಯನ್ನು ಅಡಗಿಸಿಟ್ಟಿದ್ದ ಪ್ರಿಯಕರ!
ಆತ್ಮಹತ್ಯೆ ಯತ್ನ ಸಂಬಂಧ ಪೊಲೀಸರು ಶಿವಮೂರ್ತಿಯಿಂದ ಹೇಳಿಕೆ ಪಡೆಯುವಾಗ ಕವಿತಾಳ ಹತ್ಯೆ ಮಾಡಿರುವ ವಿಚಾರ ಬಾಯಿಬಿಟ್ಟಿದ್ದ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನೇರಲಿಗೆ ಅರಣ್ಯ ಪ್ರದೇಶದಲ್ಲಿ ಕವಿತಾಳ ಮೃತದೇಹ ಪತ್ತೆಯಾಗಿತ್ತು. ಕವಿತಾಳ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಮರ್ಯಾದಾ ಹತ್ಯೆಯಿಂದ ಪ್ರೇಯಸಿ ಉಳಿಸಲು ತಾನೇ ಬೆಂಕಿ ಹಚ್ಚಿಕೊಂಡ ಪ್ರಿಯಕರ
ಡೆತ್ ನೊಟ್ ಬರೆದಿಟ್ಟಿದ್ದ ಶಿವಮೂರ್ತಿ; ಆತ್ಮಹತ್ಯೆ ಪ್ರಯತ್ನಕ್ಕೂ ಮೊದಲು ಶಿವಮೂರ್ತಿ ಡೆತ್ ನೋಟ್ ಬರೆದಿದ್ದ. ಕವಿತಾಳ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿತ್ತು. ಇದರ ಕೊನೆಯಲ್ಲಿ ಶಿವಮೂರ್ತಿ ಮತ್ತು ಕವಿತಾಳ ಹೆಸರು ಬರೆಯಲಾಗಿದೆ.
ಈ ಪತ್ರದಲ್ಲಿ ಪ್ರೀತಿಯಲ್ಲಿ ವಂಚನೆಯಾಗಿರುವ ಕುರಿತು ಬರೆಯಲಾಗಿತ್ತು. 'ತಾನು ಪಿಯುಸಿ ಓದುತ್ತಿದ್ದ ಕಾಲೇಜಿನಲ್ಲಿ ಭಟ್ಕಳ ಮೂಲದ ಕವಿತಾಳನ್ನು ಪ್ರೀತಿಸಿದೆ. ಏಳು ವರ್ಷ ಆಕೆ ನನ್ನನ್ನು ಪ್ರೀತಿಸಿದಳು. ಇತ್ತೀಚೆಗೆ ಭದ್ರಾವತಿ ಮೂಲದ ಆಂಬುಲೆನ್ಸ್ ಚಾಲಕನನ್ನು ಆಕೆ ಪ್ರೀತಿಸುತ್ತಿದ್ದಾಳೆ. ಆದ ಕಾರಣ ಆಕೆಯನ್ನು ಇಲ್ಲಿಗೆ ಕರೆತಂದು ಅನಿಸಿಕೆ ಕೇಳುತ್ತಿದ್ದೇನೆ' ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು. ಅಲ್ಲದೆ 'ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ' ಎಂದು ಬರೆಯಲಾಗಿದೆ.
ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ; ಬುಧವಾರ ಮಧ್ಯಾಹ್ನ 12 ಗಂಟೆಗೆ ಕವಿತಾಳನ್ನು ನೇರಲಿಗೆ ಅರಣ್ಯ ಪ್ರದೇಶಕ್ಕೆ ಕರೆತಂದ ಶಿವಮೂರ್ತಿ, ಆಕೆಯೊಂದಿಗೆ ಮಾತನಾಡಿದ್ದಾನೆ. ಬಳಿಕ ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಆಕೆ ಕೊನೆಯುಸಿರೆಳೆದ ನಂತರ ಶಿವಮೂರ್ತಿ ಕ್ರಿಮಿನಾಶಕ ಸೇವಿಸಿರುವ ಸಾಧ್ಯತೆ ಇದೆ. ಅದರ ಬಾಟಲಿ ಕೂಡ ಕವಿತಾಳ ಮೃತದೇಹದ ಪಕ್ಕದಲ್ಲಿ ಪತ್ತೆಯಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸಾವು; ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಶಿವಮೂರ್ತಿ ಆರೋಗ್ಯ ಬಳಿಕ ಏರುಪೇರಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲೇ ಶಿವಮೂರ್ತಿ ಕೊನೆಯುಸಿರೆಳೆದಿದ್ದಾನೆ. ಈ ಮಧ್ಯೆ ಕವಿತಾಳ ಪೋಷಕರು ಶಿವಮೂರ್ತಿ ವಿರುದ್ಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಮ್ಮ ಮಗಳ ಸ್ನೇಹಿತ ಶಿವಮೂರ್ತಿ ಆಕೆಯ ಹತ್ಯೆಗೈದಿದ್ದಾನೆ ಎಂದು ದೂರಿದ್ದರು.
ಇಬ್ಬರ ಪರಿಚಯವಾಗಿದ್ದು ಹೇಗೆ?; ಶಿವಮೂರ್ತಿಯು ಹೊಸನಗರ ತಾಲೂಕಿನ ತಳಲೆಯ ಕಗಲಿಜೆಡ್ಡು ಗ್ರಾಮದವನು. ಕವಿತಾ ಸಾಗರ ತಾಲೂಕು ಭಾನುಕುಳಿ ಗ್ರಾಮದ ಹೆಬ್ಬನಕೆರೆಯವಳು. ಊರಲ್ಲಿ ಓದಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಿಪ್ಪನ್ಪೇಟೆಯಲ್ಲಿರುವ ಸಂಬಂಧಿಕರ ಮನೆಲ್ಲಿದ್ದು ಓದುತ್ತಿದ್ದಳು. ಬಳಿಕ ಬಿಸಿಎಂ ಹಾಸ್ಟೆಲ್ ಸೇರಿ ಓದು ಮುಂದುವರೆಸಿದ್ದಳು. ರಿಪ್ಪನ್ಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಓದುವಾಗ ಕವಿತಾಗೆ ಶಿವಮೂರ್ತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿತ್ತು ಎಂದು ಹೇಳಲಾಗುತ್ತಿದೆ. ನಂತರ ಕವಿತಾ ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇನಲ್ಲಿ ವಿದ್ಯಭ್ಯಾಸ ಆರಂಭಿಸಿದ್ದಳು.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಹೆಚ್. ಟಿ. ಶೇಖರ್, ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ, ಸಿಪಿಐ ಮಧುಸೂದನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.