ಶಿವಮೊಗ್ಗ ಸ್ಪೋಟ ಪ್ರಕರಣ: 7 ತಿಂಗಳ ನಂತರ ಮೃತದೇಹಗಳ ಗುರುತು ಪತ್ತೆ
ಶಿವಮೊಗ್ಗ,
ಸೆಪ್ಟೆಂಬರ್
12:
ಶಿವಮೊಗ್ಗ
ಕಲ್ಲಗಂಗೂರು
ಕಲ್ಲು
ಕ್ವಾರಿಯಲ್ಲಿ
ಸಂಭವಿಸಿದ
ಭಾರಿ
ಸ್ಪೋಟದಲ್ಲಿ
ಮೃತಪಟ್ಟಿದ್ದ
ಆರನೇ
ವ್ಯಕ್ತಿಯ
ಗುರುತು
ಪತ್ತೆಯಾಗಿದೆ.
ಪ್ರಕರಣ
ಸಂಭವಿಸಿ
ಏಳೂವರೆ
ತಿಂಗಳ
ಬಳಿಕ
ವ್ಯಕ್ತಿಯ
ಗುರುತು
ಪತ್ತೆ
ಮಾಡಲಾಗಿದೆ.
ಕಲ್ಲಗಂಗೂರು
ಕ್ವಾರಿಯಲ್ಲಿ
ಸಂಭವಿಸಿದ
ಸ್ಪೋಟದಲ್ಲಿ
ಒಟ್ಟು
ಆರು
ಮಂದಿ
ಮೃತಪಟ್ಟಿದ್ದರು.
ಐವರ
ಗುರುತು
ಪತ್ತೆಯಾಗಿ
ಮೃತದೇಹಗಳನ್ನು
ಹಸ್ತಾಂತರ
ಮಾಡಲಾಗಿತ್ತು.
ಆದರೆ
ಆರನೆ
ವ್ಯಕ್ತಿಯ
ದೇಹ
ಸಂಪೂರ್ಣ
ಛಿದ್ರವಾಗಿದ್ದ
ಹಿನ್ನೆಲೆ
ಗುರುತು
ಪತ್ತೆ
ಮಾಡುವುದಕ್ಕೆ
ಸಾಧ್ಯವಾಗಿರಲಿಲ್ಲ.
ಈಗ
ಆತನ
ಗುರುತು
ಪತ್ತೆಯಾಗಿರುವುದಾಗಿ
ಪೊಲೀಸ್
ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
ಮೃತನನ್ನು
ಭದ್ರಾವತಿಯ
ಕೆ.ಹೆಚ್.ನಗರದ
ಆಟೋ
ಚಾಲಕ
ಶಶಿ
(32)
ಎಂದು
ತಿಳಿದು
ಬಂದಿದೆ.
ಶಿವಮೊಗ್ಗದಲ್ಲಿ
ಬಾರೀ
ಸ್ಫೋಟ;
ಕಲ್ಲು
ಕ್ರಷರ್
ಲೈಸೆನ್ಸ್
ರದ್ದು
ಕಲ್ಲು
ಕ್ವಾರಿ
ಸ್ಫೋಟದ
ನಂತರದಲ್ಲಿ
ಛಿದ್ರವಾಗಿದ್ದ
ದೇಹದ
ಭಾಗಗಳನ್ನು
ವಶಕ್ಕೆ
ಪಡೆದ
ಪೊಲೀಸರು
ಅವುಗಳನ್ನು
ಡಿಎನ್ಎ
ಪರೀಕ್ಷೆಗೆ
ಒಳಪಡಿಸಿದ್ದರು.
ಬೆಂಗಳೂರಿನ
ಮಡಿವಾಳದಲ್ಲಿರುವ
ಎಫ್ಎಸ್ಎಲ್
ಪ್ರಯೋಗಾಲಯಕ್ಕೆ
ಕಳುಹಿಸಿದ್ದ,
ಪರೀಕ್ಷಾ
ವರದಿಯು
ಸೆಪ್ಟೆಂಬರ್
10ರಂದು
ಬಂದಿದೆ.
ಮೃತರ
ಪೈಕಿ
ಮೂವರು
ಆಂಧ್ರದವರು:
ಕ್ವಾರಿಯಲ್ಲಿ
ಸಂಭವಿಸಿದ
ಸ್ಪೋಟದಲ್ಲಿ
ಮೃತ
ಆರು
ಮಂದಿ
ಪೈಕಿ
ಮೂರು
ಆಂಧ್ರ
ಪ್ರದೇಶ
ಮೂಲದವರು
ಎಂದು
ಗೊತ್ತಾಗಿದೆ.
ಅನಂತಪುರ
ಜಿಲ್ಲೆಯ
ರಾದುರ್ಗದ
ಪವನ್
ಕುಮಾರ್
(29),
ಜಾವೀದ್
(28),
ಚೆಲಿಮಾನು
(24)
ಎಂದು
ಗುರುತಿಸಲಾಗಿತ್ತು.
ಭದ್ರಾವತಿ
ತಾಲೂಕು
ಅಂತರಗಂಗೆ
ಗ್ರಾಮದ
ಪ್ರವೀಣ್
(36),
ಅಂತರಗಂಗೆ
ಕ್ಯಾಂಪ್'ನ
ಮಂಜುನಾಥ
(35)
ಎಂದು
ಗುರುತಿಸಲಾಗಿತ್ತು.
ಏನಿದು
ಸ್ಪೋಟ
ಪ್ರಕರಣ?:
ಕಳೆದ
2021ರ
ಜನವರಿ
21ರ
ರಾತ್ರಿ
10.20ರ
ಹೊತ್ತಿಗೆ
ಕಲ್ಲಗಂಗೂರು
ಗ್ರಾಮದ
ಸರ್ವೇ
ನಂಬರ್
2ರಲ್ಲಿರುವ
ಎಸ್.ಎಸ್.ಕ್ರಷರ್
ಬಳಿ
ಭಾರಿ
ಪ್ರಮಾಣದ
ಸ್ಪೋಟಕ
ಸ್ಪೋಟಗೊಂಡಿತ್ತು.
ಈ
ಘಟನೆಯಲ್ಲಿ
ಆರು
ಮಂದಿ
ಮೃತರಾಗಿದ್ದರು.
ಸ್ಪೋಟದ
ತೀವ್ರತೆ
ನೂರಾರು
ಕಿ.ಮೀ
ವರೆಗೆ
ವ್ಯಾಪಿಸಿತ್ತು.
ಶಿವಮೊಗ್ಗ
ಸೇರಿದಂತೆ
ಸುತ್ತಮುತ್ತಲಿನ
ಜಿಲ್ಲೆಗಳಲ್ಲಿ
ಭೂಕಂಪನದ
ಅನುಭವವಾಗಿತ್ತು.
ಆಂಧ್ರದಿಂದ
ವಾಹನದಲ್ಲಿ
ಸ್ಪೋಟಕ
ತುಂಬಿಕೊಂಡು
ತರಲಾಗಿತ್ತು.
ಕ್ರಷರ್
ಬಳಿ
ವಾಹನ
ನಿಲ್ಲಿಸಿದ್ದಾಗ
ಸ್ಪೋಟ
ಸಂಭವಿಸಿದ್ದು,
ಘಟನೆ
ಸಂಬಂಧ
ಕ್ವಾರಿ
ಮಾಲೀಕರು,
ಕ್ವಾರಿಗೆ
ಜಾಗ
ನೀಡಿದ
ಮಾಲೀಕ,
ಸ್ಪೋಟಕ
ಪೂರೈಕೆ
ಮಾಡಿದಾತ
ಸೇರಿದಂತೆ
ಹಲವರ
ವಿರುದ್ಧ
ಪ್ರಕರಣ
ದಾಖಲಾಗಿತ್ತು.
ಅಲ್ಲದೆ
ಈ
ಘಟನೆ
ರಾಜಕೀಯ
ಕೆಸರೆರಚಾಟಕ್ಕೂ
ಸಾಕ್ಷಿಯಾಗಿತ್ತು.