ಭವಿಷ್ಯ: ಈಡಿಗ ಸಮುದಾಯದ ಶಾಸಕರೊಬ್ಬರು 'ಸಿಎಂ' ಆಗಲಿದ್ದಾರೆ!
ಶಿವಮೊಗ್ಗ, ಜುಲೈ 21: "ಕರ್ನಾಟಕದಲ್ಲಿ ಈಡಿಗ ಸಮುದಾಯದವರೊಬ್ಬರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ,'' ಎಂದು ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಲಾಗುತ್ತದೆ ಎನ್ನುವ ಸುದ್ದಿ ಕಳೆದ ಒಂದು ವಾರದಿಂದ ಹರಡಿದೆ. ಸದ್ಯ ಸಿಎಂ ಬದಲಾವಣೆ ವಿಚಾರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿಯಾಗಿದ್ದು, ಯಡಿಯೂರಪ್ಪ ಬದಲಾವಣೆಗೆ ಹಲವು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಭವಿಷ್ಯ ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಡಿಗ ಸಮುದಾಯದಿಂದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಬುಧವಾರ
ಶಿವಮೊಗ್ಗದಲ್ಲಿ
ಮಾಧ್ಯಮಗಳೊಂದಿಗೆ
ಮಾತನಾಡಿದ
ಪ್ರಣವಾನಂದ
ಸ್ವಾಮೀಜಿ,
"ರಾಜ್ಯದಲ್ಲಿ
ಈಡಿಗ
ಸಮುದಾಯದ
ಏಳು
ಶಾಸಕರು
ಇದ್ದಾರೆ.
ಆದರೆ
ಕೋಟಾ
ಶ್ರೀನಿವಾಸ್
ಪೂಜಾರಿಯವರನ್ನು
ಮಾತ್ರ
ಸಚಿವರನ್ನಾಗಿ
ಮಾಡಲಾಗಿದೆ.
ನಮ್ಮ
ಸಮುದಾಯಕ್ಕೆ
ಉಪಮುಖ್ಯಮಂತ್ರಿ
ಹುದ್ದೆ
ಪಡೆಯುವ
ಸಾಮರ್ಥ್ಯವಿದೆ.
ಈಡಿಗ
ಸಮುದಾಯದ
ಜನರಿಗೆ
ಸಾಮಾಜಿಕ
ಮತ್ತು
ರಾಜಕೀಯ
ನ್ಯಾಯವನ್ನು
ನೀಡಿಲ್ಲ,''
ಎಂದು
ಹೇಳಿದರು.
"ಈಡಿಗ ಸಮುದಾಯಕ್ಕೆ ಅನ್ಯಾಯವಾದರೆ ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸುತ್ತದೆ,'' ಎಂದು ಎಚ್ಚರಿಸಿದರು. ಈಡಿಗ ಸಮುದಾಯದ ಮುಖಂಡರೊಬ್ಬರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಾವು ಭಾಗವಹಿಸುವುದಾಗಿ,'' ತಿಳಿಸಿದರು.
"ಹಿಂದುತ್ವವು ನಮ್ಮ ಜೀವನಶೈಲಿ, ಆದರೆ ಬಿಜೆಪಿ ಮತ್ತು ಆರ್ಎಎಸ್ಎಸ್ನ ಏಕಸ್ವಾಮ್ಯವಲ್ಲ. ಈಡಿಗ ಸಮುದಾಯದ ಜನರ ಕಲ್ಯಾಣಕ್ಕಾಗಿ ಆರ್ಯ ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು,'' ಎಂದು ಪ್ರಣವಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
Recommended Video
ಸದ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಕೆಳಗಿಳಿಸಲಾಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಈ ಎಲ್ಲ ಗೊಂದಲಗಳಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ಸ್ಪಷ್ಟನೆ ನೀಡಬೇಕಿದೆ.