ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾವಿಯಿಂದ ನೀರು ಎಳೆಯುವಾಗ ಆಯತಪ್ಪಿ ಬಿದ್ದು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 21: ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಗುರುವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಮನೆಯಲ್ಲಿದ್ದ ಹಸುಗಳಿಗೆ ನೀರು ಕುಡಿಸುವ ಸಲುವಾಗಿ ಮನೆಯ ಮುಂದೆ ಇದ್ದ ಬಾವಿಯಲ್ಲಿ ನೀರು ಎಳೆಯುವ ಸಂದರ್ಭದಲ್ಲಿ ಯುವತಿ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗಾಜನೂರು ಡ್ಯಾಂನಲ್ಲಿ ಸೆಲ್ಫೀ ತೆಗೆಯವಾಗ ಜಾರಿ ಬಿದ್ದು ಯುವಕ ನೀರುಪಾಲುಗಾಜನೂರು ಡ್ಯಾಂನಲ್ಲಿ ಸೆಲ್ಫೀ ತೆಗೆಯವಾಗ ಜಾರಿ ಬಿದ್ದು ಯುವಕ ನೀರುಪಾಲು

ದಿನನಿತ್ಯದಂತೆ ಇಂದು ಸಹ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗಲು ತಯಾರಿ ಆಗಿ ನಂತರ ಮನೆಯಲ್ಲಿದ್ದ ಹಸುಗಳಿಗೆ ನೀರು ಕುಡಿಸುವ ಸಲುವಾಗಿ ಬಾವಿಯಿಂದ ನೀರು ಎಳೆಯುವಾಗ ಈ ಘಟನೆ ನಡೆದಿದೆ.

Sagara: B.Sc Nursing Student Dies After Falling Into Well

ಮೇಘರಾಜ್ ರವರು ಅಂಗವಿಕಲರಾಗಿದ್ದು, ತಮ್ಮ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಎರಡು ಹೆಣ್ಣುಮಕ್ಕಳ ಇದ್ದು, ಹಿರಿಯ ಮಗಳ ವಿವಾಹವಾಗಿದೆ.

ಮೃತಪಟ್ಟ ಅಂಜಲಿಯು ಸಾಗರ ತಾಲೂಕಿನ ಉಳ್ಳೂರಿನ ಗಂಗೋತ್ರಿ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು.

Sagara: B.Sc Nursing Student Dies After Falling Into Well

ಘಟನಾ ಸ್ಥಳಕ್ಕೆ ನಾಗರ ಗ್ರಾಮಾಂತರ ಪೊಲೀಸರು ಭೇಟಿಕೊಟ್ಟು ವಿದ್ಯಾರ್ಥಿನಿಯ ಮೃತದೇಹವನ್ನು ಸಾಗರ ಉಪ ವಿಭಾಗ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
A BSc nursing student died after fall into well in Sagara taluk at around 6am on Thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X